ವಿಜಯದಶಮಿ ಹಬ್ಬವನ್ನು ಗನ್ ಫೈರಿಂಗ್ ಮೂಲಕ ಆಚರಿಸಿದ ವಿಶ್ವ ಹಿಂದೂ ಪರಿಷತ್ ಮುಖಂಡ

Prasthutha|

ಕಲಬುರಗಿ : ವಿಶ್ವ ಹಿಂದೂ ಪರಿಷತ್ ಮುಖಂಡೊಬ್ಬರು ಬಹಿರಂಗವಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಿಜಯದಶಮಿ ಹಬ್ಬವನ್ನು ಆಚರಿಸಿದ ಘಟನೆಯೊಂದು ಕಲಬುರ್ಗಿಯಲ್ಲಿ ನಡೆದಿದೆ.

- Advertisement -

ಕಲಬುರಗಿ ವಿಶ್ವ ಹಿಂದೂ ಪರಿಷತ್ ಘಟಕದ ಗೌರವಾಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಉಪಾಧ್ಯಕ್ಷ ಲಿಂಗರಾಜಪ್ಪ ಎಂಬುವವರು 8 ಬಾರಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ವಿಜಯ ದಶಮಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

ಕಲಬುರಗಿಯಲ್ಲಿ ವಿಜಯ ದಶಮಿ ಪ್ರಯುಕ್ತ ʼಬನ್ನಿ ಮುಡಿಯುವ, ಹಂಚುವʼ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬರುತ್ತಿದ್ದು, ಈ ಬಾರಿಯ ಹಬ್ಬವನ್ನು ಗುಂಡು ಹಾರಿಸುವ ಮೂಲಕ ಲಿಂಗರಾಜಪ್ಪ ಭಿನ್ನವಾದ ರೀತಿಯಲ್ಲಿ ಆಚರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

ಲಿಂಗರಾಜಪ್ಪ ಅವರು ನಗರದ ಗೋದುತಾಯಿ ಕಾಲೊನಿಯಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ಪರವಾನಗಿ ಹೊಂದಿರುವ ಎರಡು ಬಂದೂಕು ಗಳ ಮೂಲಕ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp