ಮೋದಿ ಹಿಂದೂ ರಾಷ್ಟ್ರಕ್ಕೆ ಕರೆ ನೀಡಿದಾಗ ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧರಾಗಿ: ಮತ್ತೆ ಗಾಯಕ ಧರ್ಮೇಂದ್ರ ಪಾಂಡೆಯಿಂದ ದ್ವೇಷ ಭಾಷಣ

Prasthutha|

ಇಟ್ವಾ: ಪ್ರಧಾನಿ ಮೋದಿ ಅವರು ಹಿಂದೂ ರಾಷ್ಟ್ರಕ್ಕೆ ಕರೆ ನೀಡಿದಾಗ ಹಿಂದೂಗಳು ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧರಾಗಿರಬೇಕು ಎಂದು ವಿವಾದಾತ್ಮಕ ಗಾಯಕ ಧರ್ಮೇಂದ್ರ ಪಾಂಡೆ ತನ್ನ ನಾಲಗೆಯನ್ನು ಹರಿಯಬಿಟ್ಟಿದ್ದಾರೆ.

- Advertisement -

ಸಿದ್ಧಾರ್ಥ ನಗರದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದು, ಪ್ರಧಾನಿ ಮೋದಿ ಅವರು ಶಸ್ತ್ರಾಸ್ತ್ರವೆತ್ತಲು ಕರೆ ನೀಡಿದಾಗ ಪ್ರತಿಯೊಬ್ಬ ಹಿಂದೂಗಳು ಸಿದ್ಧರಾಗಿರಬೇಕು ಎಂದು ಹೇಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಿಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ, ಚಪ್ಪಾಳೆ ಹೊಡೆಯಿರಿ ಮತ್ತು ದೀಪಗಳನ್ನು ಹಚ್ಚಿ ಎಂದು ಪ್ರಧಾನಿ ಹೇಳಿದಾಗ ಅನುಸರಿಸಿದ ನೀವು, ಹಿಂದೂಗಳ ಮನೆಗಳಲ್ಲಿ ಹರಿತವಾದ ಕುಡುಗೋಲನ್ನು ಇಟ್ಟುಕೊಳ್ಳಬೇಕು. ಅಲ್ಲದೆ ಪ್ರಧಾನಿ ಮೋದಿ ಅವರು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕರೆ ನೀಡಿದಾಗ ಶಸ್ತ್ರಾಸ್ತ್ರಗಳು ಉಪಯೋಗಕ್ಕೆ ಬರಲಿವೆ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಪಾಂಡೆ ಮಾಡಿದ ವಿವಾದಾತ್ಮಾಕ ಭಾಷಣದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸರ್ಕಾರದ ಮಾಜಿ ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಕೂಡ ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ವೇದಿಕೆಯಲ್ಲಿ ಉಪಸ್ಥಿತರಿದ್ದಾಗ ಅವರು ಈ ಭಾಷಣ ಮಾಡಿದ್ದರು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಿದ್ಧಾರ್ಥ್ ನಗರದ ಪೊಲೀಸ್ ಅಧಿಕಾರಿಗಳು, ಈ ವೀಡಿಯೋವನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಇದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.



Join Whatsapp