ಈದ್ ಮಿಲಾದ್ ;  ಆಚರಣೆ ಸಂಪ್ರದಾಯಬದ್ಧವಾಗಿರಲಿ: ಕಡೂರು ಪೊಲೀಸ್

Prasthutha|

ಕಡೂರು: ಈದ್ ಮಿಲಾದ್ ಹಿನ್ನೆಲೆಯಲ್ಲಿ ಕಡೂರು ಪೊಲೀಸ್ ಠಾಣೆಯಲ್ಲಿ ಸೌಹಾರ್ದ ಸಭೆ ನಡೆಯಿತು.

- Advertisement -

ಸಭಿಕರನ್ನುದ್ದೇಶಿಸಿ ಮಾತನಾಡಿದ ಡಿವೈಎಸ್ಪಿ ನಾಗರಾಜು, ಮೆರವಣಿಗೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶ ಅನ್ವಯ, ಧ್ವನಿವರ್ಧಕ ಬಳಸುವ ಅವಕಾಶವಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತ ರೀತಿಯಲ್ಲಿ ಮೆರವಣಿಗೆ ನಡೆಸಬೇಕು. ಆಚರಣೆಗಳು ಧಾರ್ಮಿಕ ಮಹತ್ವ ಪಡೆದಿರುವ ಹಿನ್ನೆಲೆಯಲ್ಲಿ ಮುಖಂಡರು ಎಚ್ಚರಿಕೆ ವಹಿಸಿ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗದಂತೆ ಎಲ್ಲರಿಗೂ ತಿಳಿಹೇಳಬೇಕು ಎಂದು ಸೂಚಿಸಿದರು.

ಪಟ್ಟಣದಲ್ಲಿ ಸೌಹಾರ್ದಕ್ಕೆ ಧಕ್ಕೆ ಬಾರದ ರೀತಿ ಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗದಂತೆ, ತಮ್ಮ ಸಂಪ್ರದಾಯದಂತೆ ಧಾರ್ಮಿಕ ಆಚರಣೆ ನಡೆಸಬೇಕು ಎಂದು ಇನ್‌ಸ್ಪೆಕ್ಟರ್ ಶಿವಕುಮಾರ್ ಮನವಿ ಮಾಡಿದರು.

- Advertisement -

ಮೆರವಣಿಗೆಯಲ್ಲಿ ಧಾರ್ಮಿಕ  ಬಾವುಟಗಳನ್ನು ಮಾತ್ರ ಉಪಯೋಗಿಸಬೇಕು. ನಿಷೇಧಿತ ಸಂಘಟನೆ ಪಿಎಫ್ಐ ಹಾಗೂ ಸಹ ಸಂಘಟನೆಗಳ  ಪ್ರಸ್ತಾಪ, ಅವುಗಳ ಬಾವುಟ ಪ್ರದರ್ಶನ ಕಾನೂನು ಬಾಹಿರ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ಪಿಎಸೈ ರಮ್ಯಾ ಸೂಚಿಸಿದರು.

ಪ್ರಮುಖರಾದ, ಭದ್ರಿಸ್ವಾಮಿ ದಾನಿ ಉಮೇಶ್, ನಾಗೇಂದ್ರ ಅಗ್ನಿ, ಚಿನ್ನರಾಜು, ಬಾಬು, ಸಯ್ಯದ್ ಯಾಸೀನ್, ಬಜರಂಗದಳ ತಾಲ್ಲೂಕು ಸಂಚಾಲಕ ಅಭಿಷೇಕ್, ಮುಸ್ಲಿಂ ಮುಖಂಡರು ಇದ್ದರು.



Join Whatsapp