ಕೇರಳ| ಸಿಪಿಎಂ ಹಿರಿಯ ನಾಯಕ ಕೋಡಿಯೇರಿ ಬಾಲಕೃಷ್ಣನ್‌ ನಿಧನ

Prasthutha|

ಚೆನ್ನೈ: ​​​​​​​ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌ವಾದ) ಪಕ್ಷದ ಹಿರಿಯ ಮುಖಂಡ, ಮಾಜಿ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್‌ (68) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ಬಾಲಕೃಷ್ಣನ್‌, 2019ರಿಂದಲೂ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -

ಕೇರಳದ ಹಿರಿಯ ರಾಜಕೀಯ ನಾಯಕರಾಗಿದ್ದ ಬಾಲಕೃಷ್ಣನ್‌, ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯರಾಗಿದ್ದರು. ತಲಶ್ಯೇರಿ ವಿಧಾನಸಭೆಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಾಲಕೃಷ್ಣನ್‌, ವಿ. ಅಚ್ಯುತಾನಂದನ್‌ ಸರ್ಕಾರದಲ್ಲಿ (2006-11) ಗೃಹ ಮತ್ತು ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಿಧಾನಸಭೆಯಲ್ಲಿ ಎರಡು ಬಾರಿ (2001-04 ಮತ್ತು 2011-16) ವಿರೋಧ ಪಕ್ಷದ ಉಪ ನಾಯಕನಾಗಿದ್ದರು.

ಮಾರ್ಚ್‌ನಲ್ಲಿ ಕೊಚ್ಚಿಯಲ್ಲಿ ನಡೆದಿದ್ದ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಸತತ ಮೂರನೇ ಬಾರಿಗೆ ಬಾಲಕೃಷ್ಣನ್‌ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಈ ಪ್ರಮುಖ ಹುದ್ದೆಯನ್ನು ಅವರು ಎಂವಿ. ಗೋವಿಂದನ್‌ ಅವರಿಗೆ ಹಸ್ತಾಂತರಿಸಿದ್ದರು.



Join Whatsapp