ರಾಜ್ಯಪಾಲರ ಅಂತಿಮ ಆದೇಶದವರೆಗೂ 9 ವಿವಿ ಕುಲಪತಿಗಳು ಮುಂದುವರಿಯಬಹುದು: ಕೇರಳ ಹೈಕೋರ್ಟ್

Prasthutha|

ಕೊಚ್ಚಿನ್: ಕೇರಳ ರಾಜ್ಯಪಾಲರು 9 ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದು, ರಾಜ್ಯಪಾಲರ ಅಂತಿಮ ಆದೇಶ ನೀಡುವವರೆಗೂ ಎಲ್ಲಾ 9 ಕುಲಪತಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ.

- Advertisement -

ಸೋಮವಾರ ನಡೆದ ವಿಶೇಷ ವಿಚಾರಣೆಯ ವೇಳೆ, ಕೇರಳದ ಒಂಬತ್ತು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ವಿಶ್ವವಿದ್ಯಾನಿಲಯದ ಈ ಕುಲಪತಿಗಳು ರಾಜೀನಾಮೆ ನೀಡುವಂತೆ ,ಕುಲಾಧಿಪತಿಯೂ ಆದ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರು ಇಂದು ಆದೇಶ ನೀಡಿದ್ದರು.

ಈ ಮಧ್ಯೆ ಕುಲಪತಿಗಳ ವಿರುದ್ಧ ಕುಲಾಧಿಪತಿ/ ರಾಜ್ಯಪಾಲರು ಅಂತಿಮ ಆದೇಶ ಹೊರಡಿಸುವವರೆಗೆ ತಮ್ಮ ಹುದ್ದೆಗಳಲ್ಲಿ ಮುಂದುವರಿಯಬಹುದು ಎಂದು ನ್ಯಾಯಾಲಯ ಸೂಚಿಸಿದೆ.



Join Whatsapp