ರವಿ ಡಿ ಚೆನ್ನಣ್ಣನವರ್ ಸೇರಿ 9 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Prasthutha|

ಬೆಂಗಳೂರು: IPS ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಮಂದಿ‌ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- Advertisement -

ಸಿಐಡಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಡಿ‌ ಚನ್ನಣ್ಣನವರ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಳಿಸಲಾಗಿದೆ‌.‌ ಇವರೊಂದಿಗೆ ಐಪಿಎಸ್ ಅಧಿಕಾರಿಗಳಾದ ಭೀಮಾಶಂಕರ್ ಗುಳೇದ್ ಅವರನ್ನು ಸಿಐಡಿಯಿಂದ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ, ಅಬ್ದುಲ್ ಅಹ್ಮದ್ ಎಸಿಬಿಯಿಂದ ಕೆಎಸ್ ಆರ್ ಟಿಸಿ ವಿಚಕ್ಷಣ ದಳಕ್ಕೆ, ಟಿ ಪಿ ಶಿವಕುಮಾರ್ ಅವರನ್ನು ಕಾರಾಗೃಹ ಇಲಾಖೆ ಎಸ್ಪಿಯಿಂದ ಚಾಮರಾಜನಗರ ಎಸ್ಪಿಯಾಗಿ, ಡೆಕ್ಕ ಕಿಶೋರ್ ಬಾಬುರನ್ನು ಬೀದರ್ ಎಸ್ಪಿಯಾಗಿ ಹಾಗೂ ಅರುಣಂಗ್ಶು ಗಿರಿ ಅವರನ್ನು ಕೊಪ್ಪಳ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

Join Whatsapp