ಬೆಳಗಾವಿ ಅರ್ಬಾಝ್ ಬರ್ಬರ ಹತ್ಯೆ | ಹಿಂದುತ್ವ ಸಂಘಟನೆಯ 8 ಮಂದಿಯ ಬಂಧನ

Prasthutha|

ಬೆಳಗಾವಿ: ಮುಸ್ಲಿಮ್ ಯುವಕನನ್ನು ತಲೆ, ಕಾಲುಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಗೆ ಸೇರಿದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಹಿಂದೂ ಯುವತಿಯನ್ನು ಪ್ರೀತಿಸಿದ ನೆಪದಲ್ಲಿ ಕಳೆದ ವಾರ ಅರ್ಬಾಝ್(24) ಎಂಬ ಮುಸ್ಲಿಮ್ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಬೆಳಗಾವಿ ಜಿಲ್ಲೆಯ ಖಾನಾಪುರ ನಿವಾಸಿಯಾದ ಅರ್ಬಾಝ್ ಅಫ್ತಾಬ್ ಎಂಬಾತ ಸೆಪ್ಟೆಂಬರ್ 28 ರಿಂದ ಕಾಣೆಯಾಗಿದ್ದನು. ಅನ್ಯ ಧರ್ಮಕ್ಕೆ ಸೇರಿದ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಶ್ರೀರಾಮಸೇನೆ ಸಂಘಟನೆಯ ಸದಸ್ಯರು ಸಾಕಷ್ಟು ಬಾರಿ ಕೊಲೆ ಬೆದರಿಕೆ ಹಾಕಿದ್ದರು. ಮಾತ್ರವಲ್ಲ ಅರ್ಬಾಝ್ ನನ್ನು ಬೆದರಿಸಿ ಹಣ ವಸೂಲಿ ಮಾಡಿದ್ದರು ಎಂದು ಮೃತನ ತಾಯಿ ದೂರಿದ್ದರು.

- Advertisement -

ಸಪ್ಟೆಂಬರ್ 29 ರಂದು ಯುವಕನ ಛಿದ್ರವಾದ ಶವ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಹಿಂದುತ್ವ ಸಂಘಟನೆಯ 8 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

Join Whatsapp