74ನೇ ಗಣರಾಜ್ಯೋತ್ಸವ| ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

Prasthutha|

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜ 25) ದೇಶವನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಭಾಷಣ ಮಾಡಲಿದ್ದಾರೆ.

- Advertisement -

ಸಂಜೆ 7 ಗಂಟೆಗೆ ರಾಷ್ಟ್ರಪತಿ ಅವರ ಭಾಷಣವು ದೇಶದ ಎಲ್ಲ ದೂರದರ್ಶನ ಹಾಗೂ ಆಕಾಶವಾಣಿ (AIR) ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ. ಭಾಷಣ ಮೊದಲು ಹಿಂದಿಯಲ್ಲಿ ನಂತರ ಇಂಗ್ಲಿಷ್​ನಲ್ಲಿ ಪ್ರಸಾರವಾಗಲಿದೆ. ನಂತರ ಪ್ರಾದೇಶಿಕ ಭಾಷೆಗಳಲ್ಲಿ ಭಾಷಣ 7:30ಕ್ಕೆ ಪ್ರಸಾರವಾಗಲಿದೆ ಎಂದು ರಾಷ್ಟ್ರಪತಿ ಭವನವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿ 26ರಂದು ನಡೆಯಲಿರುವ 74ನೇ ಗಣರಾಜ್ಯೋತ್ಸವದ ಮುನ್ನಾ ದಿನ ಇಂದು(ಜ.25) ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ.

- Advertisement -

ಜನವರಿ 26ರಂದು ಕರ್ತವ್ಯಪಥದಲ್ಲಿ ಸಶಸ್ತ್ರಪಡೆಗಳಿಂದ ವೈಭವದ ಪರೇಡ್ ನಡೆಯಲಿದೆ. ಸೇನೆ, ಪ್ಯಾರಾ ಮಿಲಿಟರಿ, ಎನ್​ಸಿಸಿ ಸೇರಿದಂತೆ ಹಲವು ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ. ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ವಿವಿಧ ಇಲಾಖೆಗಳ ಟ್ಯಾಬ್ಲೊಗಳು ಪಥಸಂಚಲನದ ಪ್ರಮುಖ ಆಕರ್ಷಣೆಯಾಗಿರಲಿದೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೋಟಾರ್ ಸೈಕಲ್ ಕಸರತ್ತು, ವೈಮಾನಿಕ ಕಸರತ್ತು, ಸೇನಾ ಬ್ಯಾಂಡ್​ನಿಂದ ಬೀಟಿಂಗ್ ರಿಟ್ರೀಟ್ ಕೂಡ ನಡೆಯಲಿದೆ.

Join Whatsapp