6ನೇ ತರಗತಿಯ ಪಠ್ಯಪುಸ್ತಕ ಬದಲಾಯಿಸಿದ ಎನ್ಸಿಇಆರ್ಟಿ: ಮಹಾಭಾರತ, ವಿಷ್ಣುಪುರಾಣ ಸೇರ್ಪಡೆ

Prasthutha|

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪಠ್ಯಕ್ರಮವನ್ನು ಬದಲಾಯಿಸಿದೆ.

- Advertisement -

6ನೇ ತರಗತಿಯಲ್ಲಿ ಸಮಾಜ ವಿಜ್ಞಾನದ ಮೂರು ವಿಭಿನ್ನ ಪುಸ್ತಕಗಳು ಇದ್ದುದನ್ನು ವಿಲೀನಗೊಳಿಸಿ ಒಂದೇ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಹೊಸ ಪಠ್ಯಪುಸ್ತಕದಲ್ಲಿ 5 ನೇ ಅಧ್ಯಾಯವನ್ನು ಸೇರಿಸಲಾಗಿದ್ದು, ಹಿಂದೂ ಪುರಾಣಗಳಾದ ಮಹಾಭಾರತ ಮತ್ತು ವಿಷ್ಣು ಪುರಾಣವನ್ನು ಸೇರಿಸಲಾಗಿದೆ. ಅನೇಕ ಸಂಸ್ಕೃತ ಪದಗಳನ್ನು ಪುಸ್ತಕದಲ್ಲಿ ಸೇರಿಸಲಾಗಿದೆ.

ಹಳೆಯ ಪಠ್ಯವು ‘ಚಾಂದೋಗ್ಯ ಉಪನಿಷತ್’ ನ ಕಥೆಯನ್ನು ಒಳಗೊಂಡಿದೆ, ಆದರೆ ಹೊಸ ಆವೃತ್ತಿಯು ‘ಕಥೋಪನಿಷತ್’ ಮತ್ತು ‘ಬೃಹದಾರಣ್ಯಕ ಉಪನಿಷತ್’ ನ ಎರಡು ಹೆಚ್ಚುವರಿ ಕಥೆಗಳನ್ನು ಒಳಗೊಂಡಿದೆ. ರಾಮಾಯಣದ ದೃಶ್ಯವನ್ನು ಚಿತ್ರಿಸುವ 18 ನೇ ಶತಮಾನದ ವರ್ಣಚಿತ್ರವನ್ನು ಸಹ ಸೇರಿಸಲಾಗಿದೆ.

- Advertisement -

ಎನ್ಸಿಇಆರ್ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಪುಸ್ತಕದ ಪರಿಚಯ ಅಧ್ಯಾಯದಲ್ಲಿ, ನಾವು ‘ದೊಡ್ಡ ಆಲೋಚನೆಗಳ’ ಮೇಲೆ ಕೇಂದ್ರೀಕರಿಸುವ ಮೂಲಕ ಪಠ್ಯವನ್ನು ಕನಿಷ್ಠವಾಗಿಡಲು ಪ್ರಯತ್ನಿಸಿದ್ದೇವೆ. ಇದರೊಂದಿಗೆ, ನಾವು ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ ಅಥವಾ ಅರ್ಥಶಾಸ್ತ್ರ ಸೇರಿದಂತೆ ಅನೇಕ ವಿಷಯಗಳನ್ನು ಒಂದೇ ವಿಷಯವಾಗಿ ಸಂಯೋಜಿಸಿದ್ದೇವೆ ಎಂದು ಬರೆದಿದ್ದಾರೆ.



Join Whatsapp