ದೇವಿಯ ಪೂಜೆಗಿಟ್ಟಿದ್ದ ಸೇಬು ಹಣ್ಣನ್ನು ತಿಂದಿದ್ದಕ್ಕೆ 6 ವರ್ಷದ ಬಾಲಕನನ್ನು ಥಳಿಸಿ ಕೊಲೆ

Prasthutha|

ಬಿಹಾರ: ದುರ್ಗಾ ದೇವಿಯ ಪೂಜೆಗೆಂದು ಇಡಲಾಗಿದ್ದ ಸೇಬು ಹಣ್ಣನ್ನು ಬಾಲಕನೊಬ್ಬ ತಿಂದಿದ್ದು, ಅದಕ್ಕಾಗಿ ಆರು ವರ್ಷದ ವಿದ್ಯಾರ್ಥಿಯನ್ನು ಥಳಿಸಿ ಕೊಂದಿರುವ ಘಟನೆ ಗಯಾದಲ್ಲಿ ನಡೆದಿದೆ. ಇಲ್ಲಿನ ಬಾಕಿ ಬಿಘಾ ಗ್ರಾಮದ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆ ನಡೆಸುತ್ತಿರುವ ಇಬ್ಬರನ್ನು ಬಂಧಿಸಲಾಗಿದೆ.

- Advertisement -

ಶಾಲೆಯ ಆವರಣದೊಳಗೆ ದುರ್ಗಾಪೂಜೆ ಆಯೋಜಿಸಲಾಗಿತ್ತು. ಪೂಜೆಗೆಂದು ಸೇಬು ಹಣ್ಣುಗಳನ್ನೂ ಇಡಲಾಗಿತ್ತು. ಬಾಲಕ ವಿವೇಕ ವಿವೇಕ್ ಪೂಜೆಗೆಂದು ಇಟ್ಟಿದ್ದ ಸೇಬು ಹಣ್ಣು ತಿಂದಿದ್ದಾನೆ. ಇದರಿಂದ ಕೋಪಗೊಂಡ ಶಾಲಾ ಸಿಬ್ಬಂದಿ ಆತನನ್ನು ಶಾಲಾ ಕೊಠಡಿಗೆ ಕರೆದೊಯ್ದು ಥಳಿಸಿದ್ದಾರೆ. ನಂತರ ಅವನನ್ನು ಶಾಲೆಯಿಂದ ಹೊರಹಾಕಿದ್ದಾರೆ.

ಶಾಲೆಯ ಗೇಟ್‌ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕನನ್ನುಆಟೋ ಡ್ರೈವರ್ ಗುರುತಿಸಿ ಮನೆಗೆ ಕರೆತಂದಿದ್ದಾರೆ. ಮನೆಯಲ್ಲಿ ತಂದು ನೋಡಿದಾಗ ಬಾಲಕನ ಗಂಭೀರ ಪರಿಸ್ಥಿತಿಯ ಅರಿವಾದ ಆಟೋ ಚಾಲಕ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ವಿವೇಕ್ ಮೃತಪಟ್ಟಿದ್ದಾನೆ. ಸಾಯುವ ಮೊದಲು, ವಿವೇಕ್ ಅವನ ಎದೆಗೆ ಹೊಡೆದದ್ದನ್ನು ತಿಳಿಸಿದ್ದಾನೆ ಎನ್ನಲಾಗಿದೆ.

- Advertisement -

ಘಟನೆ ಸಂಬಂಧ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಜೀರ್‌ಗಂಜ್‌ನ ಪೊಲೀಸರು ಹೇಳಿದ್ದಾರೆ.

Join Whatsapp