ನೆರೆ ಪರಿಸ್ಥಿತಿ ನಿಭಾಯಿಸಲು ವಿಫಲ: ಉತ್ತರ ಕೊರಿಯಾದ 30 ಅಧಿಕಾರಿಗಳಿಗೆ ಮರಣದಂಡನೆ

Prasthutha|

ಸಿನುಜು: ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ 30 ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶಿಸಿದ್ದಾರೆ.

- Advertisement -


ಭೀಕರ ಪ್ರವಾಹದಲ್ಲಿ ದೇಶದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದವು. ಉಕ್ಕಿ ಹರಿದ ಯಲು ನದಿ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ತಮ್ಮದೇ ಪಕ್ಷದ ಕಾರ್ಯದರ್ಶಿಯನ್ನು ಕಿಮ್ ವಜಾಗೊಳಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಚೊಸನ್ ಟಿ.ವಿ. ವರದಿ ಮಾಡಿದೆ.


ಈ ಕುರಿತು ಮಾಹಿತಿ ನೀಡಿದ ಉತ್ತರ ಕೊರಿಯಾದ ರಾಜತಾಂತ್ರಿಕ ಲೀ ಇಲ್ ಗ್ಯೂ, ‘ಇತ್ತೀಚಿನ ಪ್ರವಾಹದಿಂದ ತೀವ್ರ ನಷ್ಟ ಉಂಟಾಗಿದ್ದರೂ, ಸಾಮಾಜಿಕ ಭದ್ರತಾ ದೃಷ್ಟಿಯಿಂದ ದೇಶದ ಆಡಳಿತ ಪರಿಸ್ಥಿತಿಯನ್ನು ನಿರಾಕರಿಸುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ತಮ್ಮ ತಲೆ ಎಂದು ಉರುಳುವುದೋ ಎಂಬ ಭೀತಿಯಲ್ಲೇ ದಿನ ಕಳೆಯುವಂತಾಗಿದೆ’ ಎಂದಿದ್ದಾರೆ.



Join Whatsapp