ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ: 3 ವರ್ಷದ ಮಗು ಮೃತ್ಯು

Prasthutha|

ಚಂಡೀಗಢ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಪಂಜಾಬ್’ನ ರೋಪರ್ ಜಿಲ್ಲೆಯ ಕಿರಾತ್ ಪುರ್ ಸಾಹಿಬ್ ಬಳಿ ನಡೆದಿದೆ.

- Advertisement -

ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಖುಷಿ (3) ಎಂದು ಗುರುತಿಸಲಾಗಿದೆ. ಖುಷಿಯ ತಂದೆ ವಿಕಾಸ್ ಬೀದಿ ಬದಿ ವ್ಯಾಪಾರಿಯಾಗಿದ್ದು, ರೈಲು ಹಳಿ ದಾಟಿದ ತಂದೆಯನ್ನು ಹಿಂಬಾಲಿಸಿದ ಬಾಲಕಿಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್’ಪಿ) ಅಧಿಕಾರಿಗಳು ತಿಳಿಸಿದ್ದಾರೆ.

ವಿಕಾಸ್’ಗೆ ತನ್ನ ಮಗಳು ಹಿಂಬಾಲಿಸಿದ ವಿಷಯ ತಿಳಿದಿರಲಿಲ್ಲ. ಅಲ್ಲದೆ ರೈಲು ಚಾಲಕ ಮೂರು ಬಾರಿ ಸೈರನ್ ಮೊಳಗಿಸಿದ್ದ. ಆದರೆ ಬಾಲಕಿಗೆ ಇದು ಅರ್ಥವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

“ದೆಹಲಿ ಉನಾ ರೈಲ್ವೆ ಟ್ರ್ಯಾಕ್’ನಲ್ಲಿ ಬೆಳಿಗ್ಗೆ 10 ಗಂಟೆಗೆ ಬಾಲಕಿ ಹಳಿಗಳನ್ನು ದಾಟಲು ಪ್ರಯತ್ನಿಸಿದಾಗ ಅಪಘಾತ ಸಂಭವಿಸಿದೆ. ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಜಿಆರ್’ಪಿ ಸಹಾಯಕ ಸಬ್’ಇನ್ಸ್’ಪೆಕ್ಟರ್ ಕುಲದೀಪ್ ಸಿಂಗ್ ತಿಳಿಸಿದ್ದಾರೆ.

Join Whatsapp