ವಡೋದರಾದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಘರ್ಷಣೆ, 13 ಮಂದಿ ಬಂಧನ

Prasthutha|

ವಡೋದರಾ: ಗುಜರಾತ್ ನ  ವಡೋದರಾದಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ.

- Advertisement -

ಪೊಲೀಸರು ತಕ್ಷಣದ ಕ್ರಮ ಕೈಗೊಂಡು, ಎರಡೂ ಕಡೆಯ 13 ಜನರನ್ನು ವಶಕ್ಕೆ ತೆಗೆದುಕೊಂಡು ಎಫ್ಐಆರ್ ದಾಖಲಿಸಿದ್ದಾರೆ.

ವಡೋದರಾದ ಮಾಂಡ್ವಿ ಬಳಿಯ ಪಾಣಿಗೇಟ್ ಪ್ರದೇಶದಲ್ಲಿ ಘಟನೆ ನಡೆದಿದೆ.

- Advertisement -

ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ತಮ್ಮೊಳಗೆ ಯಾವುದೋ ವಿಷಯದ ಬಗ್ಗೆ ವಿವಾದ ಉಂಟಾಗಿದೆ. ಬಳಿಕ  ಕಲ್ಲು ತಾರಾಟ ನಡೆದಿದೆ. ಆ ಸಮಯದಲ್ಲಿ ಮುಸ್ಲಿಮ್ ವ್ಯಕ್ತಿಗೆ ಕಲ್ಲು ತಾಗಿದ್ದು ಮತೀಯ ಘರ್ಷಣೆಗೆ ಕಾರಣವಾಗಿದೆ. ಘಟನೆಯಿಂದ ಅಪಾರ ಹಾನಿಯಾಗಿದೆ ಎನ್ನಲಾಗಿದೆ. ಘರ್ಷಣೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಎರಡೂ ಕಡೆಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Join Whatsapp