ಉಳ್ಳಾಲ ಶ್ರೀನಿವಾಸ್ ಮಲ್ಯರ 120ನೇ ಜನ್ಮದಿನೋತ್ಸವ ಆಚರಣೆ

Prasthutha|

ಮಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟಗಾರ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ ಅಭಿವೃದ್ಧಿಯ ಹರಿಕಾರ ಉಳ್ಳಾಲ್ ಶ್ರೀನಿವಾಸ್ ಮಲ್ಯರವರ 120ನೇ ಜನ್ಮದಿನೋತ್ಸವವನ್ನು ಸಾಮರಸ್ಯ ಮಂಗಳೂರು ಸಂಘಟನೆ ನೇತೃತ್ವದಲ್ಲಿ ನಗರದ ಕದ್ರಿಯಲ್ಲಿರುವ ಉಳ್ಳಾಲ್ ಶ್ರೀನಿವಾಸ್ ಮಲ್ಯ ಸ್ಮಾರಕ ಉದ್ಯಾನವನದಲ್ಲಿ ಆಚರಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಮಲ್ಯ ರವರ ಕುಟುಂಬಸ್ಥರಾದ ನರಹರಿ ಮಲ್ಯ, ಬಾಲಚಂದ್ರ ಮಲ್ಯ, ವಿಜಿತಾತ್ಮ ಮಲ್ಯ, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲ್ಲಿನೋ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಮಾಜಿ ಉಪಮಹಾಪೌರ ಮುಹಮ್ಮದ್ ಕುಂಜತ್’ಬೈಲ್, ವಿಶ್ವಕರ್ಮ ಸಮಾಜದ ಮುಖಂಡ ಉದಯ್ ಆಚಾರ್, ಕುಡಿಯಾಲ್ ಖಬ್ಬರ್ ಪತ್ರಿಕೆಯ ಸಂಪಾದಕರಾದ ವೆಂಕಟೇಶ್ ಬಾಳಿಗ, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಬಿ ಸಾಲಿಯಾನ್, ಯೋಗೇಶ್ ನಾಯಕ್,ಎ.ಸಿ ಜಯರಾಜ್, ಚೇತನ್ ಕುಮಾರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾಂತಲಗಟ್ಟಿ, ರೂಪ ಚೇತನ್, ಮಾಲಿನಿ ನಾಯಕ್ ,ಗಣೇಶ್ ಪೈ, ಸುರೇಂದ್ರ ಶೆಣೈ, ಉಮ್ಮರ್ ಸಾಲತ್ತೂರು, ಸತೀಶ್ ಪೆಂಗಲ್,ಶಿವಪ್ಪ ಸಾಲಿಯಾನ್ ,ಉದಯ್ ಕುಂದರ್ ,ಟಿ.ಕೆ ಸುಧೀರ್ ,ಮೋಹನ್ ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.



Join Whatsapp