ಹೈಕೋರ್ಟ್ ಮೆಟ್ಟಿಲೇರಿದ ಸಿಡಿ ಪ್ರಕರಣದ ಸಂತ್ರಸ್ತೆಯ ತಂದೆ

Prasthutha|

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸೆಕ್ಸ್ ಹಗರಣದ ಸಂತ್ರಸ್ತ ಯುವತಿಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದು, ಯುವತಿಯ ಹೇಳಿಕೆ ದಾಖಲಿಸದಂತೆ, ಈಗಾಗಲೇ ಹೇಳಿಕೆ ದಾಖಲಿಸಿದ್ದರೆ ಆ ವೀಡಿಯೋ ನೀಡುವಂತೆ ಕೇಳಿಕೊಂಡಿದ್ದಾರೆ.

- Advertisement -

ಇಂದು ಹೈಕೋರ್ಟ್ ಗೆ ಈ ಸಂಬಂಧ ಅರ್ಜಿ ಸಲ್ಲಿಸಿರುವ ಸಂತ್ರಸ್ತ ಯುವತಿಯ ತಂದೆ, ಮಗಳ ಹೇಳಿಕೆ ಪರಿಗಣಿಸದಂತೆ ಕೇಳಿಕೊಂಡಿದ್ದು, ಸಿಆರ್ ಪಿ ಸಿ 164 ಹೇಳಿಕೆ ದಾಖಲಾತಿ ರದ್ದಿಗೆ ಮನವಿ ಮಾಡಿದ್ದಾರೆ. ಜೊತೆಗೆ ಹೈಕೋರ್ಟ್ ಆದೇಶದವರೆಗೂ ಹೇಳಿಕೆ ಪರಿಗಣಿಸಬೇಡಿ, ಯುವತಿ ಹೇಳಿಕೆಯ ವೀಡಿಯೋ ದಾಖಲೆ ಕೊಡಿ. ನನ್ನ ಮಗಳು ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಭಾವ, ಒತ್ತಡ, ಬಲವಂತದಿಂದ ನನ್ನ ಮಗಳು ಹೇಳಿಕೆ ನೀಡುತ್ತಿದ್ದಾಳೆ. ಮಗಳು ನಮ್ಮ ಅಥವಾ ಕೋರ್ಟ್ ಸುಪರ್ಧಿಯಲ್ಲಿರಲಿ. ನನ್ನ ಮಗಳ ಈಗಿನ ಸ್ಥಿತಿ ಚೆನ್ನಾಗಿಲ್ಲ. ಕೆಲ ದಿನ ಅವಳನ್ನು ಒಂಟಿಯಾಗಿರಲು ಬಿಡಿ ಎಂಬುದಾಗಿಯೂ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Join Whatsapp