ಹಥ್ರಾಸ್ ಪ್ರಕರಣ |‌ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

Prasthutha|

ಹಥ್ರಾಸ್: ಹಥ್ರಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.  ನಿಖಿಲ್ ಶರ್ಮಾ ಮತ್ತು ರೋಹಿತಾಶ್ ಶರ್ಮಾ ಬಂಧಿತ ಆರೋಪಿಗಳಾಗಿದ್ದಾರೆ.

- Advertisement -

 ಆರೋಪಿಗಳನ್ನು ಬಂಧಿಸಲು ಸಹಾಯ ಮಾಡಿದವರಿಗೆ ತಲಾ 25 ಸಾವಿರ ನೀಡಲಾಗುವುದು ಎಂದು ಆಗ್ರಾ ಎಡಿಜಿ ಜಾನ್ ರಾಜೀವ್ ಕೃಷ್ಣ ಘೋಷಿಸಿದ್ದರು.

ಲಲಿತ್ ಶರ್ಮಾ ಎಂಬವರು ಈ ಆರೋಪಿಗಳ ಸುಳಿವು ನೀಡಿದ್ದು, ಅವರಿಗೆ 25-25 ಸಾವಿರ ರೂಪಾಯಿಗಳಂತೆ, 50 ಸಾವಿರ ರೂಪಾಯಿಗಳ  ಬಹುಮಾನವನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ.

- Advertisement -

 ಪ್ರಮುಖ ಆರೋಪಿ ಗೌರವ್ ಶರ್ಮಾನನ್ನು ಪೊಲೀಸರು ಹತ್ಯೆ ಮಾಡಿಲ್ಲ. ಆತನ ಬಂಧನಕ್ಕೆ ಪೊಲೀಸ್ ತಂಡಗಳು ಮುಂದಾಗಿದ್ದು, ಈತನ ಸುಳಿವು ನೀಡಿದವರಿಗೆ ಪೊಲೀಸರು 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

Join Whatsapp