ಶಾಸಕ ಸಂಗಮೇಶ್ ಒಂದು ವಾರ ಅಮಾನತು

Prasthutha|

- Advertisement -

ಬೆಂಗಳೂರು : ಒಂದು ದೇಶ, ಒಂದೇ ಚುನಾವಣೆ ಚರ್ಚೆ ಸಂಬಂಧ ಶರ್ಚ್ ಬಿಚ್ಚಿ ಸದನದಲ್ಲಿ ಪ್ರತಿಭಟನೆ ನಡೆಸಿದ ಭದ್ರಾವತಿಯ ಶಾಸಕ ಸಂಗಮೇಶ್ ಅವರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ವಾರ ಸದನದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸಂಗಮೇಶ್ ಅಶಿಸ್ತಿನಿಂದ ನಡೆದುಕೊಂಡಿರುವುದರಿಂದ ಅವರ ನಡೆಯನ್ನು ಸದನ ಒಪ್ಪುವುದಿಲ್ಲ ಎಂಬುದಾಗಿ ಸದನದಲ್ಲೇ ಎಚ್ಚರಿಕೆ ನೀಡಿದ ಸ್ಪೀಕರ್ ಕಾಗೇರಿ, ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಕೈಗೊಂಡರು. ಇಂತಹ ನಿರ್ಧಾರಕ್ಕೆ ಆಡಳಿತ ಪಕ್ಷ ಒಪ್ಪಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಸಂಗಮೇಶ್ ಅವರನ್ನು ಸದನದಿಂದ ಒಂದುವಾರಗಳ ಕಾಲ ಅಮಾನತುಗೊಳಿಸಿದ್ದಾರೆ.

Join Whatsapp