ರಾಜ್ಯೋತ್ಸವ ಪ್ರಯುಕ್ತ ‘ಪ್ರಸ್ತುತ’ ಓದುಗರ ವೇದಿಕೆಯಿಂದ ಕವನ ಸ್ಪರ್ಧೆ: ನಾಳೆ ವಿಜೇತರಿಗೆ ಪ್ರಶಸ್ತಿ ವಿತರಣೆ

Prasthutha|

ಮಂಗಳೂರು: ‘ಪ್ರಸ್ತುತ ಓದುಗರ ವೇದಿಕೆ, ಜುಬೈಲ್, ಸೌದಿ ಅರೇಬಿಯಾ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಮಂಗಳೂರಿನಲ್ಲಿ ನಾಳೆ (ಡಿ.2) ನಡೆಯಲಿದೆ.

- Advertisement -

ಕಾರ್ಯಕ್ರಮವು ಬೆಳಗ್ಗೆ 10.00 ಗಂಟೆಗೆ ‘ಪ್ರಸ್ತುತ’ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಪ್ರಸ್ತುತ ಸಂಪಾದಕೀಯ ಮಂಡಳಿ ಸದಸ್ಯೆ ಶಾಹಿದಾ ಅಸ್ಲಂ, ಪ್ರಸ್ತುತ ಓದುಗರ ವೇದಿಕೆ ಜುಬೈಲ್ ಇದರ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಸಂಪಾದಕ ಝಿಯಾವುಲ್ ಹಕ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.

Join Whatsapp