ರಮಝಾನ್ ಹಬ್ಬಕ್ಕೆ ಹೊಸಬಟ್ಟೆ ತರಲು ಹೋಗುತ್ತಿದ್ದಾಗ ಅಪಘಾತ: ಮೆಕಾನಿಕ್ ಅಪಘಾತಕ್ಕೆ ಬಲಿ

Prasthutha|

ಬೆಂಗಳೂರು: ರಮಝಾನ್ ಹಬ್ಬಕ್ಕೆ ಹೊಸಬಟ್ಟೆ ಖರೀದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಹರಿದು ಸವಾರ ಮೆಕಾನಿಕ್ ಒಬ್ಬರು ಸಾವನ್ನಪ್ಪಿದ್ದರೆ, ಅವರ ಸ್ನೇಹಿತ ಗಾಯಗೊಂಡ ದಾರುಣ ಘಟನೆ ಕಾರ್ಪೊರೇಷನ್ ಸರ್ಕಲ್ ನ ಪಲ್ಲವಿ ಥಿಯೇಟರ್ ಬಸ್ ನಿಲ್ದಾಣದ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

- Advertisement -

ಸಿಟಿ ಮಾರುಕಟ್ಟೆಯ ಮೆಕ್ಯಾನಿಕ್ ಮುಹಮ್ಮದ್ ಆಲಿ ಜಿನ್ನಾ (22) ಮೃತಪಟ್ಟರೆ, ಗಾಯಗೊಂಡ ಆತನ ಸ್ನೇಹಿತ ಮುಬಾರಕ್ ಅಹಮದ್ (20) ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಚಿಂತಾಜಕವಾಗಿದೆ.

ಶಿವಾಜಿನಗರದಲ್ಲಿ ರಮಝಾನ್ ಹಬ್ಬಕ್ಕೆ ಹೊಸಬಟ್ಟೆಗಳನ್ನು ತೆಗೆದುಕೊಂಡು ಸ್ಕೂಟರ್ ನಲ್ಲಿ ಇವರಿಬ್ಬರೂ ಸಿಟಿ ಮಾರುಕಟ್ಟೆಗೆ ಮಧ್ಯರಾತ್ರಿ 12 ಗಂಟೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯದ ಪಲ್ಲವಿ ಥಿಯೇಟರ್ ಬಸ್ ನಿಲ್ದಾಣದ ಬಳಿ ಮಳೆಯಿಂದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಹರಿದು ಮುಹಮ್ಮದ್ ಆಲಿ ಜಿನ್ನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮುಬಾರಕ್ ಅಹಮದ್  ಸೊಂಟದ ಭಾಗ ಛಿದ್ರವಾಗಿದೆ.

- Advertisement -

ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp