ಮೃತ ಬಿಜೆಪಿ ನಾಯಕನ ಪತ್ನಿ ಕೈಮುಗಿದು ಗೋಗರೆದರೂ ಅಂತ್ಯಸಂಸ್ಕಾರಕ್ಕೆ ಹತ್ತಿರ ಸುಳಿಯದ ಬಿಜೆಪಿ ಕಾರ್ಯಕರ್ತರು!

Prasthutha|

►ಕೊನೆಗೆ ನೆರವಿಗೆ ಬಂದು ಮಾನವೀಯತೆ ಮೆರೆದ ಟಿಎಂಸಿ ಕಾರ್ಯಕರ್ತರು
ಪ.ಬಂಗಾಳ : ಹೃದಯಾಘಾತದಿಂದ ಮೃತಪಟ್ಟ ಬಿಜೆಪಿ ನಾಯಕನ ಅಂತ್ಯ ಕ್ರಿಯೆ ನಡೆಸಿ ಕೊಡುವಂತೆ ಮೃತನ ಪತ್ನಿ ಬೇಡಿಕೊಂಡರೂ ಬಿಜೆಪಿ ಕಾರ್ಯಕರ್ತರು ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದು, ಕೊನೆಗೆ ಟಿಎಂಸಿ ಕಾರ್ಯಕರ್ತರು ಮುಂದೆ ಬಂದು ಅಂತ್ಯಕ್ರಿಯೆ ನಡೆಸಿರುವ ಘಟನೆ ವರದಿಯಾಗಿದೆ.

- Advertisement -


ಬಿಜೆಪಿ ಬೂತು ಅಧ್ಯಕ್ಷರಾದ ಅನುಪಮ್ ಬ್ಯಾನರ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಬಿಜೆಪಿ ಕಾರ್ಯಕರ್ತರು ನಿರಾಕರಿಸಿದ್ದಾರೆ. ಮೃತರ ಪತ್ನಿ ಬಿಜೆಪಿಯ ಎಲ್ಲಾ ನಾಯಕರಲ್ಲಿ ತನ್ನ ಪತಿಯ ಅಂತ್ಯಸಂಸ್ಕಾರ ನಡೆಸಿಕೊಡುವಂತೆ ಬೇಡಿಕೊಂಡರೂ ಬಿಜೆಪಿ ಕಾರ್ಯಕರ್ತರು ಅಂತ್ಯಕ್ರಿಯೆಯನ್ನು ನಡೆಸಿಲ್ಲ. ನಂತರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಟಿಎಂಸಿ ನಾಯಕ ಬುಡನ್ ಶೇಖ್ ನೇತೃತ್ವದಲ್ಲಿ ಅಂತ್ಯಕ್ರಿಯನ್ನು ನಡೆಸಿ ಮಾನವೀಯತೆ ಮೆರೆದಿದ್ದಾರೆ.

Join Whatsapp