ಬಿಹಾರ | ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಘರ್ಷಣೆ | ಓರ್ವ ಬಲಿ, 27 ಮಂದಿಗೆ ಗಾಯ

Prasthutha|

ಪಾಟ್ನಾ : ನಾಳೆಯಷ್ಟೇ ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ನಡುವೆ, ಅಲ್ಲಿನ ಮುಂಗೆರ್ ಪಟ್ಟಣದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಓರ್ವ ಬಲಿಯಾಗಿದ್ದಾನೆ. ಪೊಲೀಸರು ಮತ್ತು ದುರ್ಗಾ ಆರಾಧಕರ ನಡುವೆ ಗುಂಪು ಘರ್ಷಣೆ ನಡೆದಿದ್ದು, ಗುಂಡು ತಗುಲಿ ಒಬ್ಬ ಮೃತಪಟ್ಟಿದ್ದು, 20 ಮಂದಿ ಪೊಲೀಸರು ಸೇರಿದಂತೆ 27 ಮಂದಿ ಗಾಯಗೊಂಡಿದ್ದಾರೆ.

- Advertisement -

ಘರ್ಷಣೆಯಲ್ಲಿ ಕೆಲವರು ಬಂದೂಕು ಬಳಸಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ವಿಜಯ ದಶಮಿ ಹಬ್ಬದ ಮೂರು ದಿನಗಳ ಬಳಿಕ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತದೆ. ಆದರೆ, ಈ ಬಾರಿ ಬುಧವಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇರುವುದರಿಮದ, ಮಂಗಳವಾರವೇ 5 ಗಂಟೆಯೊಳಗೆ ದುರ್ಗಾ ವಿಸರ್ಜನೆಗೆ ಅಧಿಕಾರಿಗಳು ಒತ್ತಾಯಿಸಿದ್ದರು.

ದುರ್ಗಾ ಪೂಜಾ ಸಂಘಟಕರು ತೆರಳುವ ಸಂದರ್ಭ ಜೋರಾಗಿ ಡಿಜೆ ಸಂಗೀತ ಹಾಕಲಾಗಿತ್ತು. ರಾತ್ರಿ 11:50ರ ಸುಮಾರಿಗೆ ವಿಗ್ರಹ ಹೊತ್ತು ಸಾಗುತ್ತಿದ್ದವರನ್ನು ಪೊಲೀಸರು ಥಳಿಸಿದುದು ಪರಿಸ್ಥಿತಿ ವಿಕೋಪಕ್ಕೆ ತೆರಳಲು ಕಾರಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿಗೆ ಗುಂಡಿನ ಏಟು ತಗುಲಿದೆ ಎನ್ನಲಾಗಿದೆ.

- Advertisement -

ಈ ಕುರಿತ ವೀಡಿಯೊವೊಂದನ್ನು ಟ್ವೀಟ್ ಮಾಡಿರುವ ಸಾಮಾಜಿಕ ಹೋರಾಟಗಾರ ಕನ್ಹಯ್ಯಾ ಕುಮಾರ್, ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿರುವುದಾಗಿ ತಿಳಿಸಿದ್ದಾರೆ.

Join Whatsapp