ಪುಣೆ | ಶಿವಸೇನೆ ಲೋನವಾಲ ಘಟಕದ ಮಾಜಿ ಅಧ್ಯಕ್ಷ ರಾಹುಲ್ ಶೆಟ್ಟಿ ಗುಂಡಿಕ್ಕಿ ಹತ್ಯೆ

Prasthutha|

ಪುಣೆ : ಇಲ್ಲಿನ ಲೋನವಾಲದಲ್ಲಿ ಸ್ಥಳೀಯ ಶಿವಸೇನಾ ನಾಯಕ ರಾಹುಲ್ ಉಮೇಶ್ ಶೆಟ್ಟಿ (43) ಹತ್ಯೆ ನಡೆದಿದೆ. ಸ್ಥಳೀಯ ಶಿವಸೇನೆ ಘಟಕದ ಮಾಜಿ ಅಧ್ಯಕ್ಷರಾದ ರಾಹುಲ್ ಅವರಿಗೆ ದುಷ್ಕರ್ಮಿಗಳು ಗುಂಡಿಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

- Advertisement -

ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ರಾಹುಲ್ ಅವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಆಯುಧದಿಂದ ತಿವಿದವನನ್ನು ಗುರುತಿಸಲಾಗಿದೆ, ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುತ್ತದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಪ್ರದೇಶದ ಹನುಮಾನ್ ತೆಕ್ಡಿಯಲ್ಲಿ ನಿನ್ನೆ ಗಣೇಶ್ ನಾಯ್ಡು ಎಂಬವರ ಕೊಲೆ ನಡೆದಿದೆ. ಈ ಕೊಲೆಗೂ, ರಾಹುಲ್ ಹತ್ಯೆಗೂ ಸಂಬಂಧವಿದೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದ್ದಾರೆ.

Join Whatsapp