ಪಿಎಸ್ಐ ಅಕ್ರಮವನ್ನು ಸೂಕ್ಷ್ಮವಾಗಿ ತನಿಖೆಗೊಳಪಡಿಸಿದರೆ ಸಿದ್ದರಾಮಯ್ಯ ಸಿಕ್ಕಿಬೀಳುತ್ತಾರೆ – ಸಚಿವ ಅಶ್ವತ್ ನಾರಾಯಣ

Prasthutha|

ಮಂಡ್ಯ :ಪಿ ಎಸ್ ಐ ಅಕ್ರಮವನ್ನು ಸೂಕ್ಷ್ಮವಾಗಿ ತನಿಖೆ ನಡೆಸಿ, ಕೆದಕಿದರೆ ಸಿದ್ದರಾಮಯ್ಯ ಅವರು ಖಂಡಿತವಾಗಿ ಸಿಕ್ಕಿ ಬೀಳುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಹೇಳಿದ್ದಾರೆ.

- Advertisement -

‘ಸಿದ್ದರಾಮಯ್ಯ ಅವರು ಔಟ್ ಡೇಟೆಡ್ ರಾಜಕಾರಣಿ, ಅವರ ಕಾಲದಲ್ಲಿ ಶಾಂತರಾಂ ಪ್ರಕರಣದ ನಡೆದಿತ್ತು. ಆ ಕುರಿತು ತನಿಖೆಗೆ ಅವರು ಆಸಕ್ತಿ ತೋರಿಲ್ಲ. ಪಿ ಎಸ್ ಐ ಅಕ್ರಮವನ್ನು ತನಿಖೆ ಮಾಡಿಸಿ, ಅಪರಾಧಿಗಳನ್ನು ಬಯಲಿಗೆಳೆಯುತ್ತೇವೆ’ ಎಂದು ಅವರು ಹೇಳಿದ್ದಾರೆ.

ಮೇಲುಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ ನಾರಾಯಣ ಸಿದ್ದರಾಮಯ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp