ನ್ಯಾಯಾಲಯದ ಆವರಣದಲ್ಲಿಯೇ ಕೊನೆಯುಸಿರೆಳೆದ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಬಂದ ಬಾಲಕ!

Prasthutha|

ತಿರುಪತಿ:  ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನೊಬ್ಬ ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಪೋಷಕರ ಜತೆ ಬಂದಿದ್ದು, ನ್ಯಾಯಾಲಯದ ಆವರಣದಲ್ಲೇ ಮೃತಪಟ್ಟ ಘಟನೆ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ನಡೆದಿದೆ.

- Advertisement -

ಹರ್ಷವರ್ಧನ್ ಎಂಬ 10 ವರ್ಷದ ಬಾಲಕ ನಾಲ್ಕು ವರ್ಷಗಳ ಹಿಂದೆ ತನ್ನ ಮನೆಯ ಟೆರೇಸ್‌ನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಅಂದಿನಿಂದಲೂ ಆತ ಕೋಮಾ ಸ್ಥಿತಿಯಲ್ಲಿದ್ದು, ಅವನನ್ನು ಸಾಮಾನ್ಯ ಸ್ಥಿತಿಗೆ ತರಲು ಅವನ ಪೋಷಕರು ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ.

ನಂತರ ಕುಟುಂಬವು ಹಲವಾರು ಆಸ್ಪತ್ರೆಗಳಲ್ಲಿ ಬಾಲಕನಿಗೆ ಚಿಕಿತ್ಸೆಯನ್ನು ಕೊಡಿಸಿದರೂ ಕೂಡ ಬಾಲಕನ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ. ತಮ್ಮ ಮಗನ ಚಿಕಿತ್ಸೆಗೆ ಹೆಚ್ಚಿನ ಖರ್ಚು ಮಾಡುವ ಸ್ಥಿತಿಯಲ್ಲಿಲ್ಲದ ಹರ್ಷವರ್ಧನ್ ಪೋಷಕರು ಪುಂಗನೂರಿನ ನ್ಯಾಯಾಲಯಕ್ಕೆ ದಯಾಮರಣ ಅರ್ಜಿ ಸಲ್ಲಿಸಲು ಹೋಗಿದ್ದ ವೇಳೆ ಬಾಲಕನು ನ್ಯಾಯಾಲಯದ ಆವರಣದಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.

Join Whatsapp