ಡಿ.8ಕ್ಕೆ ಭಾರತ್ ಬಂದ್: ಟಿ.ಆರ್.ಎಸ್ ಬೆಂಬಲ

Prasthutha|

ಹೈದರಾಬಾದ್: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಡಿಸೆಂಬರ್ 8ಕ್ಕೆ ಕರೆ ನೀಡಿರುವ ಭಾರತ್ ಬಂದ್ ಗೆ ತೆಲಂಗಾಣ ಮುಖ್ಯಮಂತ್ರಿ ಟಿ.ಆರ್.ಎಸ್. ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

ರೈತರು ಡಿಸೆಂಬರ್ 8ಕ್ಕೆ ಕರೆ ನೀಡಿರುವ ಬಂದ್ ತೆಲಂಗಾಣದಲ್ಲಿ ಯಶಸ್ಸುಗೊಳಿಸಬೇಕೆಂದು ಅವರು ಇಂದು ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮನವಿ ಮಾಡಿದ್ದಾರೆ.

ಪ್ರಸ್ತಾಪಿತ ಬಂದ್ ನಲ್ಲಿ ಟಿ.ಆರ್.ಎಸ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Join Whatsapp