ಡಿಕೆ ಶಿವಕುಮಾರ್ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು: ಬಿಜೆಪಿಯ ಆರ್. ಅಶೋಕ್ ಗೆ ಮುಖಭಂಗ

Prasthutha|

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಯಅಭ್ಯರ್ಥಿ ಆರ್. ಅಶೋಕ್ ತೀವ್ರ ಮುಖಭಂಗ ಅನುಭವಿಸಿದ್ದಾರೆ.

- Advertisement -

ಕಂದಾಯ ಸಚಿವರ ಸ್ಪರ್ಧೆಯ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಮ್ಮ ಭದ್ರಕೋಟೆಯಲ್ಲಿ ಜಯಭೇರಿ ಭಾರಿಸಿದ್ದಾರೆ. ಇಲ್ಲಿ ಬಿಜೆಪಿಯ ಅಭ್ಯರ್ಥಿ ಆರ್‌. ಅಶೋಕ್‌ ಸೋಲನ್ನು ಕಂಡಿದ್ದಾರೆ.

ಕನಕಪುರ ಮೊದಲಿನಿಂದಲೂ ಕಾಂಗ್ರೆಸ್‌ನ, ಅದರಲ್ಲೂ ಡಿಕೆ ಶಿವಕುಮಾರ್‌ ಅವರ ಭದ್ರಕೋಟೆ. ಈ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಆರ್‌. ಅಶೋಕ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಡಿಕೆಶಿ ಅವರಿಗೆ ಮೂಗುದಾರ ಹಾಕುವ ಯತ್ನ ನಡೆಸಿದೆ. ಆದರೆ ಇದು ಫಲ ನೀಡಲಿಲ್ಲ.

Join Whatsapp