ರಾತ್ರಿ ಲುಲು ಮಾಲ್, ಕೆಪಿಸಿಸಿ ಕಛೇರಿ ಸೇರಿದಂತೆ ವಿವಿಧೆಡೆ ಡಿಕೆಶಿ ವಿರುದ್ಧ ಪೋಸ್ಟರ್

Prasthutha|

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಪಾತ್ರ ಇದೆ ಎಂಬ ದೇವರಾಜಗೌಡರ ಆರೋಪದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಪೋಸ್ಟರ್ ವಾರ್ ಶುರುವಾಗಿದೆ. ರಾತ್ರಿ ಲುಲು ಮಾಲ್, ಕೆಪಿಸಿಸಿ ಕಛೇರಿ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.

- Advertisement -

ಇನ್ನೂ ಪ್ರಕರಣದ ರೂವಾರಿ ಡಿಕೆ. ಶಿವಕುಮಾರ್ ಎಂದಿರುವ ವಕೀಲ ದೇವರಾಜೇಗೌಡ, ಡಿಕೆ ಶಿವಕುಮಾರ್ ಆಫರ್ ಕೊಟ್ಟರು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದರು. ಆದರೆ ದೇವರಾಜೇಗೌಡ ಅರ್ಧಂಬರ್ಧ ಆಡಿಯೋ ಪ್ಲೇ ಮಾಡಿದ್ದು, ಫುಲ್ ಆಡಿಯೋ ಪ್ಲೇ ಮಾಡಲು ಆಗಲ್ಲ ಎಂದು ದೇವರಾಜೇಗೌಡ ತಿಳಿಸಿದ್ದರು. ಪ್ಲೇ ಮಾಡಿದ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ‘ಹೇಳ್ರಿ ಏನು ವಿಚಾರ’ ಎನ್ನುವ ಮಾತಷ್ಟನ್ನೇ ಕೇಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಸ್‌ಐಟಿ ಅಧಿಕಾರಿ ಸುಮನ್ ಪೆನ್ನೇಕಾರ್ ಫೋಟೋ ತೋರಿಸಿದ ವಕೀಲ ದೇವರಾಜೇಗೌಡ, ಇವರು ನನ್ನ ಹೇಳಿಕೆಯಲ್ಲಿರುವ ಡಿಕೆ ಶಿವಕುಮಾರ್ ಅವರ ಹೆಸರನ್ನು ತೆಗೆಯಲು ಹೇಳಿದ್ದರು ಎಂದು ಆರೋಪಿಸಿದ್ದಾರೆ.

Join Whatsapp