“ಗೋಮಾಂಸ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್ ಎ ಒಂದೇ: ಆರ್ ಎಸ್ ಎಸ್ ಗೆ ತಿರುಗೇಟು ನೀಡಿದ ಸಾಧ್ವಿ ಪ್ರಾಚಿ

Prasthutha|

ಹೊಸದಿಲ್ಲಿ: “ಗೋಮಾಂಸ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್ ಎ ಒಂದೇ” ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಆರ್ ಎಸ್ ಎಸ್ ಗೆ ತಿರುಗೇಟು ನೀಡಿದ್ದಾರೆ.

- Advertisement -


ಇತ್ತೀಚೆಗೆ ಸಮಾರಂಭವೊಂದರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಭಾಗವತ್, “ಯಾವುದೇ ಧರ್ಮಗಳಾದರೂ ಎಲ್ಲಾ ಭಾರತೀಯರು ಒಂದೇ. ಇಲ್ಲಿನ ಹಿಂದೂಗಳು ಮುಸ್ಲಿಮರ ಡಿಎನ್ ಎ ಒಂದೇ” ಎಂದು ಹೇಳಿದ್ದರು.


ಈ ಹೇಳಿಕೆಗೆ ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯ್ರಮವೊಂದರಲ್ಲಿ ತಿರುಗೇಟು ನೀಡಿರುವ ಪ್ರಾಚಿ, “ದನದ ಮಾಂಸ ತಿನ್ನುವವರನ್ನು ಹೊರತುಪಡಿಸಿ ಉಳಿದವರೆಲ್ಲಾ ಒಂದೇ ಡಿಎನ್ ಎಯವರು” ಎಂದು ಹೇಳಿದ್ದಾರೆ.
ರಾಜಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ನ ಹೆಸರಿನಲ್ಲಿ ಮೋಸಗೊಳಿಸಿ ಮತಾಂತರಗೊಳಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ಭಾರತೀಯರೆಲ್ಲರ ಡಿಎನ್ ಎ ಒಂದೇ ಇರಬಹುದು, ಆದರೆ ನಮ್ಮಲ್ಲಿ ಗೋಮಾಂಸ ಸೇವಿಸುವವರ ಡಿಎನ್ ಎ ಇರುವುದಿಲ್ಲ ಎಂದು ಪ್ರಾಚಿ ಹೇಳಿದ್ದಾರೆ.

- Advertisement -

Join Whatsapp