ಕೇವಲ ಹದಿನೈದೇ ದಿನದಲ್ಲಿ ಮತ್ತೊಬ್ಬ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕತ್ತು ಸೀಳಿ ಹತ್ಯೆ

Prasthutha|

ಲಖನೌ : ಉತ್ತರ ಪ್ರದೇಶದ ಲಖೀಂಪುರ ಪ್ರದೇಶದಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಮತ್ತೊಬ್ಬ ದಲಿತ ಬಾಲಕಿಯ ಭೀಕರ ಅತ್ಯಾಚಾರ ನಡೆಸಿ, ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಎಂದು ತೆರಳಿದ್ದ ಬಾಲಕಿ ನಾಪತ್ತೆಯಾಗಿದ 22 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯ ದೇಹವನ್ನು ಪ್ರಾಣಿಗಳು ತಿಂದಿರುವ ಬಗ್ಗೆಯೂ ವರದಿಯಾಗಿದೆ

- Advertisement -

ಬಾಲಕಿ ತನ್ನ 9ನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್, 200 ರೂ. ತಗೊಂಡು ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸಲು ತೆರಳಿದ್ದಳು. ಆಕೆ ಮನೆಗೆ ಹಿಂದಿರುಗುವ ವೇಳೆ ದುಷ್ಕರ್ಮಿಗಳು ಆಕೆಯ ಮೇಲೆ ದಾಳಿ ನಡೆಸಿರುವ ಸಾಧ್ಯತೆಯಿದೆ. ಬಾಲಕಿಯ ಮನೆಯಿಂದ 500 ಮೀಟರ್ ದೂರದ ನೀರಿಲ್ಲದ ಕೆರೆಯ ಬಳಿ ಶವ ಪತ್ತೆಯಾಗಿದೆ. ಹುಡುಗಿಯ ಕತ್ತು ಸೀಳಿರುವುದು ಕಂಡುಬಂದಿದೆ. ಆಕೆಯ ಎಡ ಕಾಲಿನ ಭಾಗವನ್ನು ಪ್ರಾಣಿಗಳು ತಿಂದಿರುವುದು ಕಂಡು ಬಂದಿದೆ. ಆಕೆಯಲ್ಲಿದ್ದ ಅಂಕಪಟ್ಟಿ, ಫೋನ್ ಪಕ್ಕದಲ್ಲೇ ಬಿದ್ದಿದ್ದವು. ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವೇ ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಇನ್ನೊಬ್ಬ ಬಾಲಕಿಯನ್ನು ಅತ್ಯಾಚಾರ ನಡೆಸಿ, ಕತ್ತು ಸೀಳಿ, ನಾಲಿಗೆ ಕತ್ತರಿಸಿ ಅಮಾನವೀಯವಾಗಿ ಹತ್ಯೆ ಮಾಡಲಾಗಿತ್ತು.

- Advertisement -

ಮೃತ ಬಾಲಕಿಯ ಕುಟುಂಬಸ್ಥರು ಈಗ ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ. “ನನ್ನ ಮಗಳು ಹುಡುಗಿಯಂತಿರಲಿಲ್ಲ, ಹುಡುಗನಂತಿದ್ದಳು. ಆಕೆಯ ಮೇಲೆ ಯಾರಾದರೂ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರೆ, ಹೀಗೆ ಹತ್ಯೆ ಮಾಡುವುದಕ್ಕೂ ಮೊದಲು ಆಕೆ ಕೊನೆವರೆಗೂ ಸಾಕಷ್ಟು ಹೋರಾಟ ಮಾಡಿರುತ್ತಾಳೆ’’ ಎಂದು ಆಕೆಯ ತಂದೆ ಹೇಳಿದ್ದಾರೆ. ಆಕೆ ತುಂಬಾ ಧೈರ್ಯವಂತೆಯಾಗಿದ್ದಳು. ಹೀಗಾಗಿ ಅವಳೊಂದಿಗೆ ಹೋಗಬೇಕೆಂದು ಅನಿಸಿರಲಿಲ್ಲ. ನಾನೂ ಆಕೆಯೊಂದಿಗೆ ಹೋಗಿದ್ದರೆ, ಆಕೆ ಬದುಕುಳಿಯುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ಅಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಕ್ರಿಮಿನಲ್ ಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ ಎಂಬುದು ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಭೀಕರ ಅಪರಾಧ ಪ್ರಕರಣಗಳಿಂದ ತಿಳಿದುಬರುತ್ತಿದೆ.

ಫೋಟೊ ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್

Join Whatsapp