ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ರಾಜಕೀಯ ಜೀವನದಲ್ಲಿ ನಾನು ಮಾಡಿದ ಮೊದಲ ತಪ್ಪು: ಸಚಿವ ಎಂಟಿಬಿ ನಾಗರಾಜ್

Prasthutha|

►► “ಕೆಟ್ಟ ಮೇಲೆ ಬುದ್ದಿ ಬಂತು” ಎಂದ ನೆಟ್ಟಿಗರು

- Advertisement -

ಚಿಕ್ಕಬಳ್ಳಾಪುರ: ಒಂದು ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿರುವುದು ರಾಜಕೀಯ ಜೀವನದಲ್ಲಿ ನಾನು ಮಾಡಿದ ಮೊದಲ ತಪ್ಪು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.


ಆಪರೇಷನ್ ಕಮಲಕ್ಕೆ ಸಿಲುಕಿ ಕಾಂಗ್ರೆಸ್ ತೊರೆದಿದ್ದ 17 ಮಂದಿ ಶಾಸಕರಲ್ಲಿ ಎಂಟಿಬಿ ನಾಗರಾಜ್ ಕೂಡ ಒಬ್ಬರಾಗಿದ್ದಾರೆ.
“ಕೆಟ್ಟ ಮೇಲೆ ಬುದ್ದಿ ಬಂತು” ಎಂಬಂತಾಗಿದೆ ಎಂದು ಸಚಿವರ ಹೇಳಿಕೆಗೆ ನೆಟ್ಟಿಗರು ಕುಟುಕಿದ್ದಾರೆ.

- Advertisement -


ರಾಜಕೀಯದಲ್ಲಿ ಹಣ ಮಾಡಬೇಕು ಎಂಬ ಉದ್ದೇಶ ನನಗಿಲ್ಲ. ದೇವರು ನನಗೆ ಸಾಕಷ್ಟು ಸಂಪತ್ತು ನೀಡಿದ್ದಾನೆ. ಈ ವಿಷಯದಲ್ಲಿ ನಾನು ಇಂದಿಗೂ ಪರಿಶುದ್ಧನಾಗಿದ್ದೇನೆ. ಒಂದು ಪಕ್ಷ ತೊರೆದು ಬೇರೊಂದು ಪಕ್ಷಕ್ಕೆ ಸೇರಿರುವುದು ನಾನು ನನ್ನ ಜೀವನದಲ್ಲಿ ಮಾಡಿದ ಮೊದಲ ತಪ್ಪು. ಈಗ ಅದರ ಅರಿವಾಗುತ್ತಿದೆ. ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಡೆಯವರೇ ನನ್ನನ್ನು ಪಕ್ಷದಿಂದ ಹೊರಗೆ ಕಳುಹಿಸಿದರು ಎಂದು ಅಂದಿನ ಘಟನೆಯನ್ನು ಬಾಗೇಪಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಮರಿಸಿದರು.

Join Whatsapp