ಒನ್ ನೇಷನ್ ಹೆಸರಿಗೆ ಮಾತ್ರ, ನಡೆಯುವುದೆಲ್ಲವೂ ಅವಮಾನ : ಮಮತಾ ಬ್ಯಾನರ್ಜಿ ಆಕ್ರೋಶ

Prasthutha|

ಕೋಲ್ಕತ್ತಾ : ಪ್ರಧಾನಿ ಮೋದಿ ನಡೆಸಿದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೋವಿಡ್ ಕುರಿತ ಸಭೆಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದು, ಒನ್ ನೇಷನ್ ಹೆಸರಿಗೆ ಮಾತ್ರ, ನಡೆಯುವುದೆಲ್ಲವೂ ಅವಮಾನ ಎಂದು ಅವರು ಮೋದಿ ಜೊತೆಗಿನ ಸಭೆ ಬಳಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ರಚನೆಯನ್ನು ಉಲ್ಲಂಘಿಸಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅವಮಾನಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಮೋದಿ ಯಾವುದೇ ಮುಖ್ಯಮಂತ್ರಿಗಳನ್ನು ಮಾತನಾಡಲು ಸಹ ಅನುಮತಿಸದೆ ಅವಮಾನ ಮಾಡಿದ್ದಾರೆ. ಒಂದು ರಾಷ್ಟ್ರ ಹೆಸರಿಗೆ ಮಾತ್ರ, ನಡೆಯುವುದೆಲ್ಲವೂ ಅವಮಾನ  ಎಂದು ಕೋವಿಡ್ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

- Advertisement -

ಹಲವಾರು ಸಮಸ್ಯೆಗಳನ್ನು ಹೇಳಲು ನಾವು ಸಭೆಗೆ ಹೋಗಿದ್ದೆವು. ಆದರೆ ಪ್ರಧಾನಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ ಅವರು, ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತಿನಿಧಿಸಿದ್ದರು. ಆದರೆ ಯಾರಿಗೂ ಮಾತನಾಡಲು ಅವಕಾಶವಿರಲಿಲ್ಲ. ನಾವು ಕೈಗೊಂಬೆಗಳೇ? ಎಂದು ಮಮತಾ ಪ್ರಶ್ನಿಸಿದ್ದಾರೆ.

Join Whatsapp