ಈಡಿ ಕಚೇರಿ ಹೊರಗೆ ‘ಬಿಜೆಪಿ ಕಾರ್ಯಾಲಯ’ ಬ್ಯಾನರ್

Prasthutha|

ಮುಂಬೈ: ಜಾರಿ ನಿರ್ದೇಶನಾಲಯ (ಈಡಿ) ಕಚೇರಿಯ ಮುಂದೆ ‘ಬಿಜೆಪಿ ಪ್ರಾದೇಶಿಕ ಕಾರ್ಯಾಲಯ’ ಎಂದು ಬರೆಯಲಾದ ಬ್ಯಾನರನ್ನು ಹಾಕುವ ಮೂಲಕ ಶಿವಸೇನೆ ಈಡಿಯನ್ನು ಅಣಕಿಸಿದೆ.

- Advertisement -

ಪಿ.ಎಂ.ಸಿ ಬ್ಯಾಂಕ್ ಹಣ ವರ್ಗಾವಣೆ ಸಂಬಂಧಿಸಿದಂತೆ ಶಿವಸೇನೆಯ ರಾಜ್ಯಸಭಾ ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವುತ್ ರ ಪತ್ನಿ ವರ್ಷಾರಿಗೆ ವಿಚಾರಣೆಗೆ ಹಾಜರಾಗುವಂತೆ ಈಡಿ ಸಮನ್ಸ್  ಕಳುಹಿಸಿದ ಒಂದು ದಿನ ನಂತರ ಈ ಘಟನೆ ನಡೆದಿದೆ.

ಡಿಸೆಂಬರ್ 29ರಂದು ವಿಚಾರಣೆಗೆ ಹಾಜರಾಗುವಂತೆ ವರ್ಷಾ ರಾವುತ್ ಗೆ ಈಡಿ ಕರೆ ಕಳುಹಿಸಿದೆ.

- Advertisement -

ಬಿಜೆಪಿಯೇತರ ಪಕ್ಷಗಳು ಆಳುತ್ತಿರುವ ರಾಜ್ಯಗಳನ್ನು ಗುರಿಪಡಿಸುವುದಕ್ಕಾಗಿ ಬಿಜೆಪಿ ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಈಡಿಯಂತಹ ಕೆಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.

Join Whatsapp