ಇನ್ಮುಂದೆ ಸಚಿವ ಸ್ಥಾನ ಕೇಳಲು ಸಿಎಂ ಮನೆಗೆ ಭೇಟಿ ನೀಡುವ ಅನಿವಾರ್ಯತೆ ಇಲ್ಲ: ಎಚ್ ವಿಶ್ವನಾಥ್

Prasthutha|

ಬೆಂಗಳೂರು: ನಾನು ಇನ್ನು ಮುಂದೆ ಎಂದೂ ಸಚಿವ ಸ್ಥಾನ‌ ಕೇಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ. ಆರ್.ಶಂಕರ್, ಎಂಟಿಬಿ ನಾಗರಾಜ್ ರೀತಿ ಪದೇ ಪದೇ ಮುಖ್ಯಮಂತ್ರಿ ಭೇಟಿ ಮಾಡುವವನು ನಾನಲ್ಲ. ನನಗೆ ಭೇಟಿ ನೀಡುವ ಅನಿವಾರ್ಯತೆಯೂ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

- Advertisement -

“ಮಂತ್ರಿ ಮಾಡಿ ಎಂದು ಎಷ್ಟು ಬಾರಿ ಕೇಳೋದು. ಅದು ಅವರ ಜವಾಬ್ದಾರಿ ಅಲ್ಲವೇ? ರಾಜಕಾರಣದಲ್ಲಿ ಕೊಟ್ಟ ಮಾತುಗಳು ಬಹಳ ಮುಖ್ಯ. ನಾನು ಬಿಜೆಪಿಯಲ್ಲಿ ಯಾರಿಗೆ ಬೇಕೋ ಬೇಡವೋ ಗೊತ್ತಿಲ್ಲ. ಆದರೆ ಜನರಿಗೆ ಬೇಕಾದವನಾಗಿದ್ದೇನೆ” ಎಂದು ವಿಶ್ವನಾಥ್ ಗರಂ ಆಗಿದ್ದಾರೆ.

“ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಪ್ರಾಂತೀಯ ಪಕ್ಷವನ್ನಾಗಿ ಗಟ್ಟಿ ನೆಲದಲ್ಲಿ ಕಟ್ಟಬೇಕೆಂಬ ಆಸೆ ಇತ್ತು. ಆದರೆ, ಅದಕ್ಕೆ ಬೆಂಬಲ ಸಿಗಲೇ ಇಲ್ಲ. ಅದು ಈಗ ಜಸ್ಟ್ ಅಡ್ಜೆಸ್ಟ್ ಮೆಂಟ್ ಪಾರ್ಟಿಯಾಗಿ ಉಳಿದು ಹೋಗಿದೆ” ಎಂದು ಹೇಳಿದರು.

- Advertisement -

ಒಳ ಒಪ್ಪಂದ ಮಾಡಿಕೊಂಡು ತನ್ನನ್ನ ಸೋಲಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯರನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿದ್ದೆವು. ಅವರಿಂದ ಸಹಾಯ ಪಡೆದವರೇ ಒಳ ಒಪ್ಪಂದ ಮಾಡಿಕೊಂಡು ಸೋಲಿಸಿದರು. ಅವರ ದರ್ಪ, ದುರಹಂಕಾರದ ಕಾರಣ ಸೋತಿದ್ದಾರೆ” ಎಂದು ಹೇಳಿದರು.

ರಾಜಕಾರಣದಲ್ಲಿ ನಿರೀಕ್ಷೆಗೂ ಮೀರಿದ ‌ತೀರ್ಮಾನಗಳು ಆಗುತ್ತಿವೆ. ಬಿಜೆಪಿಗೆ ಜೆಡಿಎಸ್‌ ಅನಿವಾರ್ಯ ಅಲ್ಲವೇ ಅಲ್ಲ. 2006ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಬಿಜೆಪಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ ಎಂದರು.

Join Whatsapp