ಆಸ್ತಿ ತೆರಿಗೆ ವಿರುದ್ಧ ಮೇಲ್ಮನವಿ: ರಜನೀಕಾಂತ್ ಗೆ ಕೋರ್ಟ್ ಛೀಮಾರಿ
Prasthutha: October 14, 2020

ಚೆನ್ನೈ: ತನ್ನ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ 6.50 ಲಕ್ಷ ರೂಪಾಯಿ ಆಸ್ತಿ ತೆರಿಗೆಯನ್ನು ಕೊರಿದ ಚೆನ್ನೈ ಕಾರ್ಪೊರೇಶನ್ ವಿರುದ್ಧ ಮೇಲ್ಮನವಿ ಸಲ್ಲಿಸಿದ ರಜನಿಕಾಂತ್ ಗೆ ಮದ್ರಾಸ್ ಹೈಕೋರ್ಟ್ ಎಚ್ಚರಿಕೆಯನ್ನು ನೀಡಿದೆ.
ಅವರ ಮಂಟಪವು ತಮಿಳುನಾಡಿನ ಕೊಡಂಬಕಮ್ ನಲ್ಲಿದೆ.
ತೆರಿಗೆ ಬೇಡಿಕೆಯ ವಿರುದ್ಧ ಕೋರ್ಟ್ ಪ್ರವೇಶಿಸಿರುವುದಕ್ಕಾಗಿ ವೆಚ್ಚಗಳನ್ನು ವಿಧಿಸಲಾಗುವುದು. ತಮ್ಮ ಪ್ರಕರಣವನ್ನು ಹಿಂದೆಗೆಯಲು ಸಮಯ ನೀಡುವಂತೆ ಅವರ ವಕೀಲರು ನ್ಯಾಯಾಲಯವನ್ನು ಕೇಳಿದ್ದಾರೆ.
2020ರ ಮಾರ್ಚ್ 24ರಿಂದ ತನ್ನ ಕಲ್ಯಾಣ ಮಂಟಪವು ಖಾಲಿ ಬಿದ್ದಿದೆ. ಆದಾಯವಿಲ್ಲದ ಕಾರಣ ತೆರಿಗೆ ನೀಡಲು ಸಾಧ್ಯವಿಲ್ಲ ಎಂದು ರಜನೀಕಾಂತ್ ಕೋರ್ಟ್ ಗೆ ಹೇಳಿದ್ದರು.
