Home ಟಾಪ್ ಸುದ್ದಿಗಳು ಬೈಕ್ ಕಳವು ರೌಡಿ‌ ನವೀನ್ ಸೇರಿ ಇಬ್ಬರು ಸೆರೆ

ಬೈಕ್ ಕಳವು ರೌಡಿ‌ ನವೀನ್ ಸೇರಿ ಇಬ್ಬರು ಸೆರೆ

ಬೆಂಗಳೂರು : ನಗರದ ವಿವಿಧೆಡೆಗಳಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಶ್ರೀರಾಂಪುರ ರೌಡಿ ನವೀನ್ ನನ್ನು ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾಟನ್ ಪೇಟೆಯ ಬಂಧಿತ ರೌಡಿ‌ ನವೀನ್​ ಬಂಧಿತ ಆರೋಪಿಯಾಗಿದ್ದು ಈತನ ಜೊತೆಗೆ ಬೈಕ್ ಕಳವು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.


ಅಪರಾಧ ಕೃತ್ಯವೊಂದರಲ್ಲಿ ಜೈಲು ಸೇರಿದ್ದ ಆರೋಪಿ ನವೀನ್​ ಗೆ ಜೈಲಿನಲ್ಲಿದ್ದಾಗ ತಮಿಳುನಾಡು ವೇಲೂರು ಪ್ರಭು ಎಂಬಾತನ ಪರಿಚಯವಾಗಿತ್ತು.ಜೈಲಿನಿಂದ ಜಾಮೀನಿನ ಮೇಲೆ‌ ಬಿಡುಗಡೆಯಾದ ಬಳಿಕ ಸ್ನೇಹಿತರಾಗಿದ್ದ ವೇಲೂರು ಪ್ರಭು ಮತ್ತು ನವೀನ್ ನಗರದಲ್ಲಿ ಬೈಕ್​ ಕಳ್ಳತನ ದಂಧೆ ನಡೆಸುತ್ತಿದ್ದರು.ವೇಲೂರು ಪ್ರಭು ರಾಯಲ್ ಎನ್ ಫೀಲ್ಡ್ ಬೈಕ್ ಕಳವು‌ ಮಾಡುವುದರಲ್ಲಿ ನಿಷ್ಣಾತನಾಗಿದ್ದನು.ಬಂಧಿತ ಆರೋಪಿಯಿಂದ 11 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.


ಮತ್ತೊಬ್ಬ ಬೈಕ್​ ಕಳ್ಳ ಸೆರೆ:
ಕೆಂಗೇರಿ, ಅಶೋಕ್ ನಗರ, ಕೋರಮಂಗಲ, ಕುಮಾರಸ್ವಾಮಿ ಲೇಔಟ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ರೆಹಮತ್ ಅಲಿ ಬಂಧಿತ ಆರೋಪಿಯಾಗಿದ್ದು ಆತನಿಂದ 2 ಲಕ್ಷ 80 ಸಾವಿರ ಮೌಲ್ಯದ 4 ಬೈಕ್​ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಯು ಹಿಂದೆ ಡಕಾಯಿತಿ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿಯಿದೆ.
ಆತನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ‌ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.

Join Whatsapp
Exit mobile version