ನಿನ್ನ ಕ್ಷಮಿಸಲ್ಲ ಎಂದು ಮೋದಿ ಹೇಳಿದ್ದರು: ಪ್ರಜ್ಞಾಸಿಂಗ್‌ ಠಾಕೂರ್‌

Prasthutha|

ಭೋಪಾಲ್: ನಾನು ಈ ಹಿಂದೆ ಆಡಿದ್ದ ಕೆಲ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಿಸಿದ್ದರು. ನನ್ನನ್ನು ಉದ್ದೇಶಿಸಿ “ನಿನ್ನನ್ನು ಕ್ಷಮಿಸಲ್ಲ” ಎಂದು ಹೇಳಿದ್ದರು ಎಂದು ಭೋಪಾಲ್‌ ಕ್ಷೇತ್ರದ ಬಿಜೆಪಿ ಸಂಸದೆ, ವಿವಾದಿತ ಪ್ರಜ್ಞಾಸಿಂಗ್‌ ಠಾಕೂರ್‌ ಹೇಳಿದ್ದಾರೆ.

- Advertisement -

ಭೋಪಾಲ್‌ ಟಿಕೆಟ್‌ ತಪ್ಪಿದ ಬಳಿಕ ಪ್ರತಿಕ್ರಿಯಿಸಿರುವ ಪ್ರಜ್ಞಾ, ಈ ಹಿಂದೆಯೂ ನಾನು ಟಿಕೆಟ್‌ ಕೇಳಿರಲಿಲ್ಲ, ಈಗಲೂ ಕೇಳಿರಲಿಲ್ಲ. ಈ ಹಿಂದೆ ನಾನು ಆಡಿದ್ದ ಮಾತುಗಳು ಪ್ರಧಾನಿ ಮೋದಿ ಅವರಿಗೆ ಬೇಸರ ತಂದಿತ್ತು. ಆ ವಿಷಯದಲ್ಲಿ ನನ್ನನ್ನು ಕ್ಷಮಿಸಲ್ಲ ಎಂದು ಅವರು ಹೇಳಿದ್ದರು. ಆದರೆ ಈ ವಿಷಯದಲ್ಲಿ ನಾವು ಈಗಾಗಲೇ ಅವರ ಬಳಿ ಕ್ಷಮೆ ಕೇಳಿದ್ದೇನೆ’ ಎಂದು ಹೇಳಿದ್ದಾರೆ.

ಗಾಂಧೀಜಿ ಮತ್ತು ನಾಥೂರಾಂ ಗೋಡ್ಸೆ ಬಗ್ಗೆ ಪ್ರಜ್ಞಾ ಠಾಕೂರ್‌ ಆಡಿದ ಮಾತುಗಳು ಅತ್ಯಂತ ಆಕ್ಷೇಪಾರ್ಹ ಮತ್ತ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತವೆ ಎಂದು ಪ್ರಧಾನಿ‌ ಮೋದಿ ಹೇಳಿದ್ದರು.. ಈ ಬಗ್ಗೆ ಅವರು ಕ್ಷಮೆ ಕೇಳಿದ್ದರೂ ನಾನೆಂದೂ ಅವರನ್ನು ಪೂರ್ಣವಾಗಿ ಕ್ಷಮಿಸಲಾರೆ. ಇಂಥ ಮಾತುಗಳನ್ನು ಆಡುವ ಮುನ್ನ ಅವರು 100 ಬಾರಿ ಯೋಚಿಸಬೇಕು’ ಎಂದು ಹೇಳಿದ್ದರು ಎಂದು ಭೋಪಾಲ್ ಸಂಸದೆ ಹೇಳಿದ್ದಾರೆ.



Join Whatsapp
Exit mobile version