ಸ್ವಾತಂತ್ರ್ಯೋತ್ಸವ ಧ್ವಜಾರೋಹಣ: ಸಚಿವರ ನಿಯೋಜನೆ

Prasthutha|

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನಿಯೋಜಿಸಲಾಗಿದೆ.

- Advertisement -


ಬೆಳಗಾವಿ ಜಿಲ್ಲೆಗೆ ಗೋವಿಂದ ಎಂ.ಕಾರಜೋಳ, ಶಿವಮೊಗ್ಗ ಕೆ.ಎಸ್.ಈಶ್ವರಪ್ಪ, ಚಿತ್ರದುರ್ಗ ಬಿ.ಶ್ರೀರಾಮುಲು, ರಾಯಚೂರು ವಿ.ಸೋಮಣ್ಣ, ಬಾಗಲಕೋಟೆ ಉಮೇಶ್ ವಿಶ್ವನಾಥ ಕತ್ತಿ, ದಕ್ಷಿಣ ಕನ್ನಡ ಎಸ್.ಅಂಗಾರ, ತುಮಕೂರು ಜೆ.ಸಿ.ಮಾಧುಸ್ವಾಮಿ, ಚಿಕ್ಕಮಗಳೂರು ಅರಗ ಜ್ಞಾನೇಂದ್ರ, ರಾಮನಗರ ಡಾ.ಅಶ್ವತ್ಥ ನಾರಾಯಣ, ಗದಗ ಸಿ.ಸಿ.ಪಾಟೀಲ್, ವಿಜಯನಗರ ಆನಂದಸಿಂಗ್, ಕೊಡಗು ಕೋಟಾ ಶ್ರೀನಿವಾಸ ಪೂಜಾರಿ, ಬೀದರ್ ಪ್ರಭು ಚೌಹಾಣ್, ಕಲಬುರಗಿ ಮುರುಗೇಶ್ ನಿರಾಣಿ, ಉತ್ತರ ಕನ್ನಡ ಶಿವರಾಂ ಹೆಬ್ಬಾರ್, ಮೈಸೂರು ಎಸ್.ಟಿ.ಸೋಮಶೇಖರ್, ಹಾವೇರಿ ಬಿ.ಸಿ.ಪಾಟೀಲ್, ದಾವಣಗೆರೆ ಭೈರತಿ ಬಸವರಾಜು, ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್, ಹಾಸನ ಕೆ.ಗೋಪಾಲಯ್ಯ, ವಿಜಯಪುರ ಶಶಿಕಲಾ ಜೊಲ್ಲೆ, ಬೆಂಗಳೂರು ಗ್ರಾಮಾಂತರ ಎನ್.ನಾಗರಾಜು, ಮಂಡ್ಯ ಕೆ.ಸಿ.ನಾರಾಯಣಗೌಡ, ಯಾದಗಿರಿ ಬಿ.ಸಿ.ನಾಗೇಶ್, ಉಡುಪಿ ವಿ.ಸುನೀಲ್ ಕುಮಾರ್, ಕೊಪ್ಪಳ ಆಚಾರ್ ಹಾಲಪ್ಪ ಬಸಪ್ಪ, ಧಾರವಾಡ ಬಿ.ಪಾಟೀಲ್ ಮುನೇನಕೊಪ್ಪ, ಕೋಲಾರ ಮುನಿರತ್ನ, ಚಾಮರಾಜನಗರ ಮತ್ತು ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.

Join Whatsapp
Exit mobile version