►‘ಅಸುರಕ್ಷಿತ ಮನೆಗಳನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಸಂಸದ ಸೂಚನೆ’
ಮಂಗಳೂರು: ಪಕ್ಕದ ಮನೆಯ ಕಾಂಪೌಂಡ್ ಗೋಡೆ ಬಿದ್ದು ಮೃತಪಟ್ಟ ಮುನ್ನೂರು ಗ್ರಾಮ ಮದನಿ ನಗರದ ನಾಲ್ವರ ಕುಟುಂಬದ ಮನೆಗೆ ದ.ಕ.ಸಂಸದ ಬ್ರಿಜೇಶ್ ಚೌಟ ಭೇಟಿ ನೀಡಿದರು.
ಈ ವೇಳೆ ಚೌಟಾ ಮಾತನಾಡಿ ಅವರು, ಪ್ರಕೃತಿ ವಿಕೋಪದಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ನಿಜಕ್ಕೂ ದುರಂತ. ನಾನು ಸಾಂತ್ವನ ಹೇಳಲು ಮತ್ತು ಸ್ಥಳವನ್ನು ಪರಿಶೀಲಿಸಲು ಇಲ್ಲಿಗೆ ಬಂದಿದ್ದೇನೆ. ಘಟನೆ ನಡೆದ ದಿನವೇ ಡಿಸಿ ಹಾಗೂ ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದಿದ್ದೇನೆ ಎಂದರು.
ದ.ಕ. ಸಮತಟ್ಟಾದ ಭೂಮಿ ಅಲ್ಲದ ಕಾರಣ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹಾಗಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ. ಇಂತಹ ಅನಿಶ್ಚಿತ ಮನೆಗಳ ವಿವರ ಸಂಗ್ರಹಿಸಿ ವರದಿ ನೀಡುವಂತೆ ತಿಳಿಸಿದ್ದೇನೆ ಎಂದರು.
![](https://prasthutha.com/wp-content/uploads/2024/07/IMG-20240630-WA0095-1-jpg.webp)
![](https://prasthutha.com/wp-content/uploads/2024/07/WhatsApp-Image-2024-07-01-at-11.08.03-AM-1-jpeg.webp)