ಬಿಲ್ಕೀಸ್ ಬಾನು ಅತ್ಯಾಚಾರಿಗಳ ಬಿಡುಗಡೆ ಖಂಡಿಸಿದ ಪ್ರಕರಣದ ಶಿಕ್ಷೆ ವಿಧಿಸಿದ ನ್ಯಾಯಾಧೀಶರು

Prasthutha|

►ಈ ತೀರ್ಮಾನ ಯಾರೇ ಕೈಗೊಂಡಿದ್ದರು ಮರುಪರಿಶೀಲಿಸಬೇಕಿದೆ – ನಿವೃತ್ತ ನ್ಯಾ. ಯುಡಿ ಸಾಲ್ವಿ

- Advertisement -

ಮುಂಬೈ: 2002ರ ಗುಜರಾತ್ ಗಲಭೆಯಲ್ಲಿ ಬದುಕುಳಿದ ಮಹಿಳೆ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಂದ ಹನ್ನೊಂದು ಮಂದಿಯನ್ನು ಬಿಡುಗಡೆ ಮಾಡಬಾರದಿತ್ತು ಎಂದು 14 ವರ್ಷಗಳ ಹಿಂದೆ ಈ ಪ್ರಕರಣ ಸಂಬಂಧ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಅಪರಾಧಿಗಳನ್ನು ಸಿಹಿ-ಮಾಲೆ ಹಾಕಿ ಸ್ವಾಗತಿಸಿರುವುದನ್ನು ಅವರು ಟೀಕಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ನ್ಯಾಯಮೂರ್ತಿ ಯುಡಿ ಸಾಲ್ವಿ, “ಈ ನಿರ್ಧಾರವನ್ನು ಯಾರೇ ತೆಗೆದುಕೊಂಡಿದ್ದರೂ, ಅದನ್ನು ಮರುಪರಿಶೀಲಿಸಬೇಕು, ನಾನು ಅಷ್ಟು ಮಾತ್ರ ಹೇಳಬಲ್ಲೆ” ಎಂದಿದ್ದಾರೆ.

- Advertisement -

“ಈ ಪ್ರಕರಣವು ಪ್ರತಿಯೊಂದು ಪ್ರಕ್ರಿಯೆಯ ಮೂಲಕವೇ ಸಾಗಿತ್ತು ಮತ್ತು ಈ 11 ಅಪರಾಧಿಗಳಿಗೆ ಎಲ್ಲಾ ಪುರಾವೆಗಳ ನಂತರ ಜೀವಾವಧಿ ಶಿಕ್ಷೆಯಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಸರ್ಕಾರವು ಆ ಬಳಿಕ ಏನು ಯೋಚಿಸಿದೆ, ಅದು ಪ್ರಶ್ನೆಯಾಗಿದೆ” ಎಂದು ಅವರು ಹೇಳಿದರು.

ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿ ಶಿಕ್ಷೆಗೊಳಗಾದವರನ್ನು ಬಿಡುಗಡೆ ಮಾಡಿದ್ದು, ಅವರನ್ನು ಸ್ವಾಗತಿಸಿದ್ದು ಹಿಂದುತ್ವಕ್ಕೆ ಶೋಭೆಯೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಲ್ವಿ, ಇದು ನ್ಯಾಯವ್ಯವಸ್ಥೆಯ ಅಣಕ ಎಂದಿದ್ದಾರೆ.

Join Whatsapp
Exit mobile version