ಒಂದು ಮರ ಒಣಗಿದರೇನಂತೆ, ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತದೆ: ದರ್ಶನ್ ಕುರಿತು ಹಂಸಲೇಖ ಪ್ರತಿಕ್ರಿಯೆ

Prasthutha|

ಮಂಡ್ಯ: ಕನ್ನಡದ ಸ್ಟಾರ್ ನಟ ದರ್ಶನ್ ಜೈಲುಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಕ್ಕೆ ಬೀಳಬಾರದು. ಆದರೆ ನಮ್ಮದು ಚಂದನವನ. ಒಂದು ಮರ ಒಣಗಿದರೇನಂತೆ, ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತದೆ ಎಂದು ಹೇಳಿದ್ದಾರೆ.

ನಿಜ ಜೀವನದಲ್ಲಿ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು. ಇದು ಕಲಾವಿದರ ಕರ್ತವ್ಯ. ನಟ ದರ್ಶನ್ ನನ್ನ ಮಗು ಎಂದು ತಿಳಿದುಕೊಳ್ಳಿ. ಮಗು ತಪ್ಪು ಮಾಡಿದಾಗ ತಂದೆ ಎಷ್ಟು ನೋವು ಅನುಭವಿಸುತ್ತಾನೋ ನಾನು ನೋವು ಅನುಭವಿಸಿದ್ದೇನೆ. ಮಗುವೂ ಅಷ್ಟೇ ನೋವು ತಿಂದಿರುತ್ತದೆ ಎಂದ ಹಂಸಲೇಖ, ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು. ಇದು ಕಲಾವಿದರ ಕರ್ತವ್ಯ. ನಟ ದರ್ಶನ್ ನನ್ನ ಮಗು ಎಂದು ತಿಳಿದುಕೊಳ್ಳಿ. ಮಗು ತಪ್ಪು ಮಾಡಿದಾಗ ತಂದೆ ಎಷ್ಟು ನೋವು ಅನುಭವಿಸುತ್ತಾನೋ ನಾನು ನೋವು ಅನುಭವಿಸಿದ್ದೇನೆ. ಮಗುವೂ ಅಷ್ಟೇ ನೋವು ತಿಂದಿರುತ್ತದೆ ಎಂದು ಹೇಳಿದ್ದಾರೆ.

- Advertisement -

ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ

ನಟ ದರ್ಶನ್ ಜೈಲಿಗೆ ಹೋದ ವಿಚಾರಕ್ಕೆ ಮಾತನಾಡಿದ ನಟ ಶಿವರಾಜ್ ಕುಮಾರ್, ಎಲ್ಲಾ ಹಣೆಬರಹ, ಏನೂ ಮಾಡೋಕೆ ಆಗಲ್ಲ, ನಾವು ಏನು ಮಾಡುತ್ತೇವೆ ಅದು ಸರಿನಾ ಅಂತ ಯೋಚನೆ ಮಾಡ್ಬೇಕು, ಈ ಘಟನೆಯಿಂದ ಆ ಕುಟುಂಬಕ್ಕೆ ಮತ್ತು ದರ್ಶನ್ ಅವರ ಕುಟುಂಬಕ್ಕೆ ನೋವಾಗಿರುತ್ತದೆ ಎಂದ ಅವರು, ನ್ಯಾಯ ಏನಿದೆಯೋ ನೋಡೋಣ, ಮಾತಾಡಿ ಪ್ರಯೋಜನ ಇಲ್ಲ ಎಂದಿದ್ದಾರೆ.

Join Whatsapp
Exit mobile version