Home ಟಾಪ್ ಸುದ್ದಿಗಳು ಜೈಲಿನಿಂದ ಲಾರೆನ್ಸ್ ಬಿಷ್ಣೋಯ್ ಮಾಧ್ಯಮಕ್ಕೆ ಸಂದರ್ಶನ: 7 ಪೊಲೀಸರು ಸಸ್ಪೆಂಡ್

ಜೈಲಿನಿಂದ ಲಾರೆನ್ಸ್ ಬಿಷ್ಣೋಯ್ ಮಾಧ್ಯಮಕ್ಕೆ ಸಂದರ್ಶನ: 7 ಪೊಲೀಸರು ಸಸ್ಪೆಂಡ್

ನವದೆಹಲಿ: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ 2022 ರಲ್ಲಿ ಜೈಲಿನಿಂದ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಪಂಜಾಬ್ ಪೊಲೀಸರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.


ಅಮಾನತುಗೊಂಡವರಲ್ಲಿ ಇಬ್ಬರು ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳಾದ ಗುರ್ಶರ್ ಸಿಂಗ್ ಮತ್ತು ಸಮ್ಮರ್ ವನೀತ್, ಸಬ್-ಇನ್ಸ್ಪೆಕ್ಟರ್ ರೀನಾ, ಸಿಐಎ, ಖರಾರ್ (ಎಸ್ಎಎಸ್ ನಗರ), ಸಬ್-ಇನ್ಸ್ಪೆಕ್ಟರ್ (ಎಲ್ಆರ್) ಜಗತ್ಪಾಲ್ ಜಂಗು, ಎಜಿಟಿಎಫ್, ಸಬ್-ಇನ್ಸ್ಪೆಕ್ಟರ್ ಶಗಂಜಿತ್ ಸಿಂಗ್ (ಆಗಿನ ಕರ್ತವ್ಯ ಅಧಿಕಾರಿ), ಮತ್ತು ಹೆಡ್ ಕಾನ್ಸ್ಟೆಬಲ್ ಓಂ ಪ್ರಕಾಶ್ ಸೇರಿದ್ದಾರೆ. ಅಧಿಕಾರಿಗಳು ಅಜಾಗರೂಕತೆ ಮತ್ತು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಈ ಕ್ರಮಕೈಗೊಳ್ಳಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಸೆ.2022 ರಲ್ಲಿ ಖರಾರ್ ಸಿಐಎ ವಶದಲ್ಲಿದ್ದ. ಆತನ ಸಂದರ್ಶನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿತ್ತು. ಈ ಪ್ರಕರಣದ ತನಿಖೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಿರುವುದು ಬೆಳಕಿಗೆ ಬಂದಿತ್ತು.


ಲಾರೆನ್ಸ್ ಬಿಷ್ಣೋಯ್ ಜೈಪುರ ಸೆಂಟ್ರಲ್ ಜೈಲಿನಲ್ಲಿ ಸಂದರ್ಶಿಸಲಾಗಿದೆ ಎಂಬುದಕ್ಕೆ ವಿಶೇಷ ತನಿಖಾ ತಂಡವು ಪುರಾವೆಗಳನ್ನು ಸಲ್ಲಿಸಿತ್ತು. ತನಿಖಾ ವರದಿಯ ಆಧಾರದ ಮೇಲೆ ಶುಕ್ರವಾರ ರಾಜ್ಯ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

Join Whatsapp
Exit mobile version