Home ಜಾಲತಾಣದಿಂದ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾದ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು ನ್ಯಾಯಾಲಯ ವಿಚಾರಣೆಗೆ ಕರೆದಿತ್ತು.


ದರ್ಶನ್ ಪರ ವಾದ ಮಂಡಿಸಿದ ವಕೀಲರು, ವಾದಮಂಡನೆಗೆ ಕೊಂಚ ಕಾಲಾವಕಾಶ ಕೋರಿದ ಹಿನ್ನಲೆ ಇದೀಗ ಬೆಂಗಳೂರು ಸೆಷನ್ ಕೋರ್ಟ್ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.


ರೇಣುಕಸ್ವಾಮಿ ಭೀಕರ ಹತ್ಯೆಯಲ್ಲಿ ಕನ್ನಡ ಚಿತ್ರನಟ ದರ್ಶನ್ ಎ2 ಆರೋಪಿಯಾಗಿದ್ದು, ಪವಿತ್ರಾ ಗೌಡ ಎ1 ಆರೋಪಿ. ಈ ಪ್ರಕರಣದಲ್ಲಿ ದರ್ಶನ್ ಸಹಚರರು ಸದ್ಯ ಜೈಲುಪಾಲಾಗಿದ್ದಾರೆ.

ತನ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಒಂದೆರೆಡು ವಾರಗಳ ನಂತರ ಜಾಮೀನು ಕೋರಿ ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಸೆ.27ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.

Join Whatsapp
Exit mobile version