ಅಂಡರ್ ಪಾಸ್ ನೀರಿನಲ್ಲಿ ಸಿಲುಕಿದ ಕಾರು: ಬ್ಯಾಂಕ್ ಮ್ಯಾನೇಜರ್, ಕ್ಯಾಶಯರ್ ಮೃತ್ಯು

Prasthutha|

ನವದೆಹಲಿ: ಜಲಾವೃತಗೊಂಡಿದ್ದ ಅಂಡರ್ ಪಾಸ್ ನೊಳಗೆ ಕಾರು ಚಲಾಯಿಸಿದ ಪರಿಣಾಮ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಶಿಯರ್ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ದೆಹಲಿಯ ಫರಿದಾಬಾದ್ ನಲ್ಲಿ ನಡೆದಿದೆ.

- Advertisement -


ದೆಹಲಿ ಮತ್ತು ನ್ಯಾಷನಲ್ ಕ್ಯಾಪಿಟಲ್ ರೀಜನ್(NCR)ನಲ್ಲಿ ನಿರಂತರ ಮಳೆಯಿಂದಾಗಿ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿರುವುದಾಗಿ ವರದಿ ತಿಳಿಸಿದೆ.


ಪೊಲೀಸರ ಮಾಹಿತಿ ಪ್ರಕಾರ, ಗುರುಗ್ರಾಮ್ ಸೆಕ್ಟರ್ 31ರ ಎಚ್ ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಪುಣ್ಯಶ್ರೇಯ ಶರ್ಮಾ ಮತ್ತು ಕ್ಯಾಶಿಯರ್ ವಿರಾಜ್ ದ್ವಿವೇದಿ ಎಕ್ಸ್ ಯುವಿಯಲ್ಲಿ ಮನೆಗೆ ತೆರಳುತ್ತಿದ್ದರು.

- Advertisement -

ಅವರು ಹಳೇ ಫರಿದಾಬಾದ್ ರೈಲ್ವೆ ಅಂಡರ್ ಪಾಸ್ ತಲುಪಿದಾಗ, ನೀರು ತುಂಬಿಕೊಂಡಿರುವುದು ಕಂಡಿದ್ದು, ಅದು ಎಷ್ಟು ಪ್ರಮಾಣದ ನೀರು ಎಂಬುದನ್ನು ಊಹಿಸಲು ಅವರು ವಿಫಲರಾಗಿದ್ದರು ಎಂದು ತಿಳಿಸಿದ್ದಾರೆ.



Join Whatsapp
Exit mobile version