ಯಕ್ಷಗಾನ ಕಲಾವಿದ ವಾಮನ ಕುಮಾರ್ ರಸ್ತೆ ಅಪಘಾತಕ್ಕೆ ಬಲಿ

Prasthutha|

ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್  ಗುರುವಾರ ಬೆಳಗ್ಗಿನ ಜಾವ ಮೂಡುಬಿದಿರೆ ಗಂಟಾಲಕಟ್ಟೆ  ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

- Advertisement -

 ಅವರಿಗೆ  46 ವರ್ಷ ವಯಸ್ಸಾಗಿತ್ತು. ಬೆಳ್ತಂಗಡಿಯ ವೇಣೂರು ಗ್ರಾಮದ ಗೋಳಿತ್ಯಾರು ನಿವಾಸಿಯಾಗಿರುವ ವಾಮನ ಕುಮಾರ್ ಅವರು  ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನವನ್ನು ಮುಗಿಸಿ ರಾತ್ರಿ ಮನೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ವಾಮನ್ ಅವರು ತೆಂಕುತಿಟ್ಟಿನ ಕಲಾವಿದರಾಗಿದ್ದು, ಸುಮಾರು 30 ವರ್ಷಗಳಿಂದ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸ್ತ್ರೀ ವೇಷ, ಪುಂಡುವೇಷ ಧರಿಸಿ ಅವರು ಅಭಿನಯಿಸಿದ ಯಕ್ಷಗಾನ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

- Advertisement -

ಪತ್ನಿ ಆಶಾ ವಾಮನಕುಮಾರ್, ಪುತ್ರಿ ವಂಶಿ, ಪುತ್ರ ಭುವನ್ ಹಾಗೂ ಅಪಾರ ಬಂಧುಬಳಗ, ಕಲಾಪ್ರೇಮಿಗಳನ್ನು ವಾಮನ ಕುಮಾರ್ ಅಗಲಿದ್ದಾರೆ.

Join Whatsapp
Exit mobile version