ಬಿಜೆಪಿ ಕಳುಹಿಸುವ ಚಡ್ಡಿಗಳನ್ನು ಪ್ರಧಾನಿ ಮೋದಿಗೆ ರವಾನಿಸಲಾಗುವುದು: ಪ್ರಿಯಾಂಕ್ ಖರ್ಗೆ

Prasthutha|

ಮೈಸೂರು: ಬಿಜೆಪಿ ಪಕ್ಷದವರು ಕೆಪಿಸಿಸಿ ಕಚೇರಿಗೆ ಕಳುಹಿಸುವ ಚಡ್ಡಿಗಳನ್ನು ನೇರವಾಗಿ ಪ್ರಧಾನಿ ಮೋದಿ ಅವರಿಗೆ ರವಾನಿಸಲಾಗುವುದೆಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

- Advertisement -

ಸದ್ಯ ಬಿಜೆಪಿಯವರು ನಡೆಸುತ್ತಿರುವ ಚಡ್ಡಿ ಸಂಗ್ರಹ ಅಭಿಯಾನವನ್ನು ಬೀದರ್’ನಿಂದ ಚಾಮರಾಜನಗರವರೆಗೂ ಮುಂದುವರಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಮುಖಂಡರೆಲ್ಲರೂ ಈ ಅಭಿಯಾನದ ಭಾಗವಾಗಲಿ. ಜನರೇ ಅವರ ಮುಖಕ್ಕೆ ಉಗಿಯುತ್ತಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರೆಸ್ಸೆಸ್’ನ ಚಡ್ಡಿ ಕುರಿತು ನಾವು ಮಾತನಾಡಿದರೆ ಬಿಜೆಪಿ ಅವರ ಬುಡಕ್ಕೇಕೆ ಬೆಂಕಿ ಬಿದ್ದಿದೆ. ಅವರೇಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version