Home ಕರಾವಳಿ ಅನಿವಾಸಿ ಭಾರತೀಯರ ಕಣ್ಮಣಿ ಎಸ್. ಎಂ. ಬಶೀರ್ ನಿಧನಕ್ಕೆ SDPI ಸಂತಾಪ

ಅನಿವಾಸಿ ಭಾರತೀಯರ ಕಣ್ಮಣಿ ಎಸ್. ಎಂ. ಬಶೀರ್ ನಿಧನಕ್ಕೆ SDPI ಸಂತಾಪ

ಮಂಗಳೂರು: ಬಿಸಿಸಿಐ ದುಬೈ ಘಟಕದ ಅಧ್ಯಕ್ಷರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ ಮೂಲತಃ ಬಂಟ್ವಾಳ ತಾಲೂಕಿನ ಮಿತ್ತಬೈಲ್ ನಿವಾಸಿ ಎಸ್ ಎಂ ಬಶೀರ್ ನಿಧನಕ್ಕೆ SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಹಲವಾರು ವರ್ಷಗಳಿಂದ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಬಶೀರ್ ರವರು ಅನಿವಾಸಿ ಭಾರತೀಯರ ಪಾಲಿನ ಆಪತ್ಪಾಂಧವ ಆಗಿದ್ದರು. ಬಿಸಿಸಿಐ ಸೇರಿದಂತೆ ಹಲವಾರು ಜನಪರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬಶೀರ್ ರವರು ಸೌಮ್ಯ ಹಾಗೂ ಸಜ್ಜನ ವ್ಯಕ್ತಿತ್ವದ ಪ್ರತಿರೂಪವಾಗಿದ್ದರು ಇವರ ನಿಧನವು, ಅನಿವಾಸಿ ಭಾರತೀಯರ ಪಾಲಿಗೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಬಶೀರ್ ರವರ ಮರಣದ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಸೃಷ್ಟಿಕರ್ತನು ನೀಡಿ ಅನುಗ್ರಹಿಸಲಿ ಎಂದು ಸಂತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version