Home ಟಾಪ್ ಸುದ್ದಿಗಳು ಕಾಂಗ್ರೆಸ್ ರೌಡಿಗಳನ್ನು ತಯಾರಿ ಮಾಡುವ ಕಾರ್ಖಾನೆ: ಆರ್. ಅಶೋಕ್

ಕಾಂಗ್ರೆಸ್ ರೌಡಿಗಳನ್ನು ತಯಾರಿ ಮಾಡುವ ಕಾರ್ಖಾನೆ: ಆರ್. ಅಶೋಕ್

ಬೆಂಗಳೂರು: ರೌಡಿಗಳಿಗೆ ಬೆಳೆಯಲು ಅವಕಾಶ ಕೊಟ್ಟಿರುವ ಕಾಂಗ್ರೆಸ್ ಗೆ ಬಿಜೆಪಿ ಕುರಿತಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.


ಗಾರ್ಡನ್ ನಾಗಾ ಎಂಬ ರೌಡಿ ಸಚಿವ ಸೋಮಣ್ಣ ಅವರ ಮನೆಗೆ ಭೇಟಿ ನೀಡಿದ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ರೌಡಿಗಳನ್ನು ತಯಾರಿ ಮಾಡುವ ಕಾರ್ಖಾನೆಯಾಗಿದೆ. ಕಾಂಗ್ರೆಸ್ ದೇಶದಲ್ಲಿ 50 ವರ್ಷ ಆಡಳಿತ ಮಾಡಿದೆ. ಬೇಕಾದಷ್ಟು ರೌಡಿಗಳ ಬೆಂಬಲದಿಂದ ಅಧಿಕಾರ ನಡೆಸಿದ್ದಾರೆ. ಹಿಂದೆ ಡಾನ್’ಗಳ ರಾಜ್ಯ ಇತ್ತು. ಇವಾಗ ಅವರೆಲ್ಲಾ ಮೂಲೆ ಸೇರಿದ್ದಾರೆ ಎಂದು ಟೀಕಿಸಿದರು.


ಕಾಂಗ್ರೆಸ್ ಗೆ ಗೂಂಡಾಗಿರಿ, ಸಂಸ್ಕೃತಿ ಹಾಗೂ ಹಿನ್ನೆಲೆ ಇದೆ. ಕಾಂಗ್ರೆಸ್ ನವರ ಬೇಕಾದಷ್ಟು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಬೇಕಾದಷ್ಟು ಜನ ರೌಡಿಗಳು ಇರುವ ಫೋಟೋ ಇವೆ ಎಂದರು.

Join Whatsapp
Exit mobile version