Home ಟಾಪ್ ಸುದ್ದಿಗಳು ಅಲ್ಪಸಂಖ್ಯಾತರ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ಫೆಲೋಷಿಪ್ ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಿ: ಸಚಿವ ಜಮೀರ್’ಗೆ ಅಬ್ದುಲ್...

ಅಲ್ಪಸಂಖ್ಯಾತರ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ಫೆಲೋಷಿಪ್ ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಿ: ಸಚಿವ ಜಮೀರ್’ಗೆ ಅಬ್ದುಲ್ ಮಜೀದ್ ಪತ್ರ

0

ಬೆಂಗಳೂರು: ಕರ್ನಾಟಕದಲ್ಲಿ ಅಲ್ಪಸಂಖ್ಯಾತರ—ಅದರಲ್ಲೂ ಮುಸ್ಲಿಂ ಸಮುದಾಯದ—ಉನ್ನತ ಶಿಕ್ಷಣದ ಸ್ಥಿತಿಗತಿಯ ಕುರಿತು ಗಂಭೀರ ಚಿಂತೆ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಪತ್ರ ಬರೆದು ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಾಹಿತಿಗಳ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದಲ್ಲಿ ಎಂ.ಫಿಲ್ ಮತ್ತು ಪಿ.ಎಚ್.ಡಿ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮಾಣ 1% ಕ್ಕಿಂತ ಕಡಿಮೆ. ಈ ಹಿಂದೆ ಕೇಂದ್ರ ಒಕ್ಕೂಟ ಸರ್ಕಾರ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಷಿಪ್ ಅಡಿಯಲ್ಲಿ ಮಾಸಿಕ ₹35,000 ನೀಡುತ್ತಿದ್ದು, ಇದನ್ನು ಮೋದಿ ಸರ್ಕಾರ ರದ್ದುಪಡಿಸಿದ್ದು, ಇದು ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಗುರಿ ಹೊಂದಿದ ಮುಸ್ಲಿಂ ಯುವಕರಿಗೆ ದೊಡ್ಡ ಹಿನ್ನಡೆಯಾಗಿದೆ.

ಇದಕ್ಕೂ ಮೇಲಾಗೀ, ರಾಜ್ಯ ಸರ್ಕಾರವೂ ಈ ಹಿಂದೆ ನೀಡುತ್ತಿದ್ದ ₹25,000 ಮಾಸಿಕ ಫೆಲೋಷಿಪ್ ಅನ್ನು ಈಗ ಕೇವಲ ₹10,000 ಕ್ಕೆ ಕಡಿತಗೊಳಿಸಿದ್ದು, ಈ  ನಿರ್ಧಾರ ಆಘಾತಕಾರಿ ಹಾಗೂ ವಿದ್ಯಾವಂತ ಸಮಾಜ ನಿರ್ಮಾಣದ ಧ್ಯೇಯಕ್ಕೆ ವಿರುದ್ಧವಾಗಿದೆ.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು, ಅರ್ಹ ಅಲ್ಪಸಂಖ್ಯಾತ ಸಂಶೋಧಕರಿಗೆ ಕನಿಷ್ಠ ₹50,000 ಮಾಸಿಕ ಫೆಲೋಷಿಪ್ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

SDPI ಪಕ್ಷದ 2025 ನೇ ಆಯ ವ್ಯಯ ವರ್ಷ ದ ಜನತಾ ಬಜೆಟ್ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪ ಇದ್ದು ಈ ಬಜೆಟ್ ಬೇಡಿಕೆ ಪುಸ್ತಕ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಅಲ್ಪಸಂಖ್ಯತಾ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಚೇರಿಗೂ ಸುದೀರ್ಘ ಮನವಿಯನ್ನೂ ಸಲ್ಲಿಸಲಾಗಿದೆ.

“ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತ ಶಿಕ್ಷಣವೇ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಗೆ ಮಾರ್ಗ. ಈ ಬಗ್ಗೆ ಸರ್ಕಾರ ತಕ್ಷಣವೇ ಸ್ಪಷ್ಟವಾದ, ಪ್ರಗತಿಪರ ನಿರ್ಧಾರ ತೆಗೆದುಕೊಳ್ಳಬೇಕು,” ಎಂದು ಮಜೀದ್ ಆಗ್ರಹಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version