Home ಕರಾವಳಿ ಸುರತ್ಕಲ್ | ಲಾರಿ- ಬೈಕ್ ಅಪಘಾತ: ಸವಾರ ಬಲಿ

ಸುರತ್ಕಲ್ | ಲಾರಿ- ಬೈಕ್ ಅಪಘಾತ: ಸವಾರ ಬಲಿ

ಮಂಗಳೂರು: ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಕಂಪಾಡಿ ಬಳಿ ನಡೆದಿದೆ.


ಕೆಂಜಾರು ನಿವಾಸಿ ಟೈಟಸ್ ಪೆರೊ(70) ಮೃತ ವ್ಯಕ್ತಿ.


ಟೈಟಸ್ ಅವರು ಜೋಕಟ್ಟೆ ಕಡೆಯಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಪಣಂಬೂರು-ಬೈಕಂಪಾಡಿ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ರಸ್ತೆಗೆ ಎಸೆಯಲ್ಪಟ್ಟ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಸುರತ್ಕಲ್ ರಸ್ತೆಯ ಗುಂಡಿ ಮುಚ್ಚುವಂತೆ ಸಾರಿ ಸಾರಿ ಹೇಳಿದ್ರೂ ಕೇಳದ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿಯಾದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Join Whatsapp
Exit mobile version