Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಭೇಟಿಯಾದ ವಿವಿಧ ಸಮುದಾಯದ ಸ್ವಾಮಿಗಳು: ಸಿಎಂಗೆ ನೈತಿಕ ಬೆಂಬಲ ಘೋಷಣೆ

ಸಿದ್ದರಾಮಯ್ಯ ಭೇಟಿಯಾದ ವಿವಿಧ ಸಮುದಾಯದ ಸ್ವಾಮಿಗಳು: ಸಿಎಂಗೆ ನೈತಿಕ ಬೆಂಬಲ ಘೋಷಣೆ

ಬೆಂಗಳೂರು: ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯದ ಸ್ವಾಮೀಜಿಗಳ ನಿಯೋಗ ಇಂದು (ಆಗಸ್ಟ್​ 25) ಕಾವೇರಿ ನಿವಾಸಕ್ಕೆ ಆಗಮಿಸಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದರು.

ಈ ಮೂಲಕ ಸ್ವಾಮೀಜಿಗಳ ನಿಯೋಗ ಸಿಎಂಗೆ ಬೇಷರತ್ ನೈತಿಕ ಬೆಂಬಲ ಘೋಷಿಸಿತು.

ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜಭವನದ ಷಡ್ಯಂತ್ರಗಳನ್ನು ಸ್ವಾಮೀಜಿಗಳು, ತೀವ್ರವಾಗಿ ಖಂಡಿಸಿದ್ದು, ಷಡ್ಯಂತ್ರದ ವಿರುದ್ಧ ಒಕ್ಕೊರಲಿನಿಂದ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತು ಹೋರಾಟ ನಡೆಸುವುದಾಗಿ ಘೋಷಿಸಿದದರು.

ಸಂಪುಟದ ಸಚಿವರು, ಶಾಸಕರು ಸೇರಿದಂತೆ ಹೈಕಮಾಂಡ್​ ನಾಯಕರು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ. ಈಗ ಹಿಂದೂಳಿದ ವರ್ಗಗಳ ಸ್ವಾಮೀಜಿಗಳು ಸಹ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ನಿಮ್ಮ ಹಿಂದೆ ನಾವಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ.

Join Whatsapp
Exit mobile version